ಮೈಸೂರು :ಪ್ರತಿ ಕ್ಷಣವೂ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ. ಜಂಬೂ ಸವಾರಿ ಸಮಯದಲ್ಲೂ ಅದು ಸಾಬೀತಾಗಿದೆ.
ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಜಂಬೂ ಸವಾರಿಯ ಸಡಗರ ಕಳೆಗಟ್ಟಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಈ ವೇಳೆ ಪುನೀತ್ ರಾಜ್ಕುಮಾರ್ ಫೋಟೋ ರಾರಾಜಿಸಿದೆ. ಜಂಬೂ ಸವಾರಿ ನೋಡಲು ಬಂದಿದ್ದ ಅಭಿಮಾನಿಗಳು ಅಪ್ಪು ಫೋಟೋ ಹಿಡಿದು ಜಯಕಾರ ಹಾಕಿದ್ದಾರೆ. ಫ್ಯಾನ್ಸ್ ಮನದಲ್ಲಿ ಅಪ್ಪು ಶಾಶ್ವತವಾಗಿ ನೆಲೆಸಿರುತ್ತಾರೆ ಎಂಬುದಕ್ಕೆ ಇಂಥ ಹಲವು ಉದಾಹರಣೆಗಳು ಇವೆ. ಪ್ರತಿ ಕ್ಷಣವೂ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಾರೆ. ಜಂಬೂ ಸವಾರಿ ಸಮಯದಲ್ಲೂ ಅದು ಸಾಬೀತಾಗಿದೆ.





