Mysore
25
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರ

ಜಯಪುರ : ಮೈಸೂರು ತಾಲ್ಲೂಕು ಜಯಪುರ ಗ್ರಾಮದ ಹೊಸಕೆರೆ ಬಡಾವಣೆಯ ರೈತ ರಮೇಶ್ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿ ೭ ವರ್ಷದ ಗಂಡು ಚಿರತೆಯೊಂದು ಸೆರೆಯಾಗಿದೆ.

ಇತ್ತೀಚೆಗೆ ಚಿರತೆಯೊಂದು ರೈತರ ೨ ಹಸುಗಳು ಮತ್ತು ಮೇಕೆಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಬೋನು ಇರಿಸಿ ಚಿರತೆ ಸೆರೆಹಿಡಿಯಬೇಕು ಎಂದು ಮನವಿ ಮಾಡಿದ್ದರು.

ಇದನ್ನು ಓದಿ: ಹುಲಿ ದಾಳಿಗೆ ಹಸು ಬಲಿ ; ರೈತರ ಪ್ರತಿಭಟನೆ

ಭಾನುವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೋನಿಗೆ ಬಿದ್ದ ಚಿರತೆಯನ್ನು ಮೈಸೂರು ಅರಣ್ಯ ಕಚೇರಿಗೆ ಸಾಗಿಸಿದರು. ನಂತರ ಚಿರತೆಯನ್ನು ದೂರದ ಬಿ.ಆರ್.ಹಿಲ್ಸ್ ಅರಣ್ಯಕ್ಕೆ ಬಿಡಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಆರ್.ಎಫ್.ಒ. ಸಂತೋಷ್ ಹೂಗಾರ್, ಡಿ.ವೈ.ಆರ್.ಎಫ್.ಒ. ಸಚಿನ್, ಬೀಟ್ ಫಾರೆಸ್ಟರ್ ರಾಜೇಗೌಡ, ನಿತೀಶ್ ನಾಯ್ಕ್, ಸಿಬ್ಬಂದಿ ಅಭಿ ಹಾಜರಿದ್ದರು.

Tags:
error: Content is protected !!