Mysore
20
broken clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಮಂಡ್ಯ| ಮೂರು ಮರಿಗಳಿಂದ ದೂರವಾಗಿದ್ದ ತಾಯಿ ಚಿರತೆ ಕೊನೆಗೂ ಸೆರೆ

ಮಂಡ್ಯ: ತಾಲ್ಲೂಕಿನ ಭೂತನಹೊಸೂರು ಗ್ರಾಮದ ಸಮೀಪದ ಕಬ್ಬಿನ ಗದ್ದಯೊಂದರಲ್ಲಿ ಪತ್ತೆಯಾಗಿದ್ದ ಮೂರು ಚಿರತೆ ಮರಿಗಳಿಂದ ದೂರವಾಗಿದ್ದ ತಾಯಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

ಕಳೆದ ಬುಧವಾರ ಭೂತನ ಹೊಸೂರು ಗ್ರಾಮದ ದೇವಯ್ಯ ಮತ್ತು ಮಹದೇವ ಎಂಬುವವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ನಂತರ ಚಿರತೆ ಮರಿಗಳನ್ನು ವಶಕ್ಕೆ ತೆಗೆದುಕೊಂಡ ಸಿಬ್ಬಂದಿ ರಾತ್ರಿ ವೇಳೆಗೆ ಅದೇ ಸ್ಥಳದಲ್ಲಿ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಇಂದು ಮುಂಜಾನೆ ತಾಯಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

 

Tags:
error: Content is protected !!