ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ಯೋಜನೆಯ ಗೌರವ ವಿಜ್ಞಾನ ಸಂಪಾದಕ, ವಿಜ್ಞಾನ ಲೇಖಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಸಾತನೂರು ದೇವರಾಜು ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ -ವೀರ ಕನ್ನಡಿಗರ ಘರ್ಜನೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ ‘ಕುವೆಂಪು ಗೌರವ ಪುರಸ್ಕಾರ’ ದೊರೆತಿದೆ.
ಮೂರು ದಶಕಗಳಿಂದ ಬರೆವಣಿಗೆಯ ಕೃಷಿಯಲ್ಲಿ ತೊಡಗಿರುವ ಸಾತನೂರು ದೇವರಾಜ್ ಅವರ ಸೇವಾ ಸಾಧನೆಯನ್ನು ಪರಿಗಣಿಸಿ ಸಾಹಿತಿ ಟಿ.ಸತೀಶ್ ಜವರೇಗೌಡ ಅವರ ನೇತೃತ್ವದ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ.8ರಂದು ಬೆಳಿಗ್ಗೆ 10.30ಕ್ಕೆ ಮಂಡ್ಯ ನಗರದ ಹರ್ಡೀಕರ್ ಭವನದಲ್ಲಿ ನಡೆಯಲಿರುವ ‘ವಿಶ್ವಮಾನವ ಕುವೆಂಪು ಹಬ್ಬ’ದಲ್ಲಿ ಕುವೆಂಪು ಗೌರವ ಪುರಸ್ಕಾರ ನೀಡಲಾಗುವುದು. ವಿದ್ವಾಂಸರಾದ ಡಾ. ಸಿಪಿಕೆ, ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಪಾಲ್ಗೊಳ್ಳುವರು.
ಸಾತನೂರು ದೇವರಾಜುಗೆ ಕುವೆಂಪು ಗೌರವ ಪುರಸ್ಕಾರ





