Mysore
27
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ಕೊಡಗು: ಕಾಡಾನೆ ದಾಳಿಗೆ ಕಾಫಿ ಪ್ಲ್ಯಾಂಟರ್‌ ಬಲಿ!

ಮಡಿಕೇರಿ: ಆನೆ ದಾಳಿಗೆ ಕಾಫಿ ಪ್ಲ್ಯಾಂಟರ್‌ ಒಬ್ಬರು ಬಲಿಯಾಗಿರುವ ಘಟನೆ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ನಡೆದಿದೆ.

ಶನಿವಾರ (ಮಾ ೨೩) ಬೆಳಗ್ಗೆ ಮನೆ ಸಮೀಪದ ತಮ್ಮ ಕಾಫಿ ತೋಟಕ್ಕೆ ಹೋದಾಗ ಆನೆ ದಾಳಿ ನಡೆಸಿದೆ. ಮೃತಪಟ್ಟ ದುರ್ದೈವಿಯನ್ನು ಕಂಬೆಯಂಡ ರಾಜ ದೇವಯ್ಯ(59) ಎಂದು ಗುರುತಿಸಲಾಗಿದೆ.

ಎಂದಿನಿಂತೆ ಬೆಳಿಗ್ಗೆ ಎದ್ದು ಮನೆಯಿಂದ ತೋಟದ ಕೆಲಸಕ್ಕೆ ಹೋಗಿದ್ದಾರೆ. ಅಲ್ಲಿ ಆನೆ ಅಲ್ಲಿಯೇ ನಿಂತಿದ್ದು, ಕೆಲಸದಲ್ಲಿ ನಿರತರಾದ ದೇವಯ್ಯ ಮೇಲೆ ದಿಢೀರನೇ ದಾಳಿ ಮಾಡಿ ಪ್ರಾಣ ತೆಗೆದಿದೆ.

ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!