ಹನೂರು: ಸತತ ಒಂದು ವಾರದಿಂದ ಬೀಳುತ್ತಿರುವ ಮಳೆಗೆ ಆಲೂಗೆಡ್ಡೆ, ಜೋಳದ ಬೆಳೆ ನಾಶವಾಗಿರುವ ಹಿನ್ನೆಲೆ ರೈತ ಮಹಿಳೆಯೋರ್ವರು ಗೋಳಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದ ನಿಂಗಮ್ಮ ಎಂಬುವವರು ತಮ್ಮ ಜಮೀನಿನಲ್ಲಿ 2ಎಕರೆ ಆಲೂಗೆಡ್ಡೆ ಹಾಗೂ 1.5ಎಕರೆ ಜೋಳ ಬೆಳೆದಿದ್ದರು.ಆದರೆ ಕಳೆದ ಒಂದು ವಾರದಿಂದ ಬೀಳುತ್ತಿರುವ ಸತತ ಮಳೆಗೆ ನೀರು ತುಂಬಿಕೊಂಡು ಆಲೂಗೆಡ್ಡೆ ಸಂಪೂರ್ಣ ನಾಶವಾಗಿದೆ. ಇದಲ್ಲದೆ ಜೋಳದ ಪೈರುಗಳು ಸಹ ನೆಲಕಚ್ಚಿರುವ ಹಿನ್ನೆಲೆ 3.5ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಹಿನ್ನೆಲೆ ನಿಂಗಮ್ಮ ತಮ್ಮ ಜಮೀನಿನ ಬೆಳೆ ಯನ್ನು ನೋಡಿಕೊಂಡು ಗೋಳಾಡುತ್ತಿದ್ದಾರೆ.
ಸಂಬಂಧಪಟ್ಟ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಗ್ರಾಪಂ ಸದಸ್ಯ ಎನ್ ಕಷ್ಣಮೂರ್ತಿ ಒತ್ತಾಯಿಸಿದ್ದಾರೆ.





