ಮೈಸೂರು: ಈ ಬಾರಿಯ ಶುಶ್ರೂಷಕರ ದಿನಾಚರಣೆಯ ಪ್ರಯುಕ್ತ ಕೊರೊನಾ ಸಂದರ್ಭದಲ್ಲಿ ಶುಶ್ರೂಷಕಿಯರ ಸೇವೆಯ ಅಂಗವಾಗಿ ಟೈಗರ್ ಅಡ್ವೆಂಚರ್ ಫೌಂಡೇಷನ್ ವತಿಯಿಂದ ಮೇ ೫ರಿಂದ ೧೭ ರವರೆಗೆ ದಾಯದಿಯರಿಗಾಗಿಯೇ ಹಿಮಾಲಯ ಪರ್ವತಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೋಲಂಕಿ ತಿಳಿಸಿದ್ದಾರೆ.
ಚಾರಣವು ಸಂಪೂರ್ಣವಾಗಿ ಉಚಿತವಾಗಿದ್ದು, ದಿಲ್ಲಿ, ಅಮೃತಸರ, ಜಲಿಯನ್ ವಾಲಾಬಾಗ್ ಮೊದಲಾದೆಡೆ ಪ್ರೇಕ್ಷಣೀಯ ಸ್ಥಳ ಭೇಟಿಯೂ ನಡೆಯಲಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.೯೮೪೫೧ ೧೬೮೩೫ ಸಂಪರ್ಕಿಸಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ
ಸಂಸ್ಥೆಯ ಅನಿಲ್ಕುಮಾರ್, ಸಂತೋಷ್, ನಮ್ರತಾ ಶೆಣೈ, ಪುನೀತಾ ಪ್ರದೀಪಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





