Mysore
28
broken clouds

Social Media

ಶನಿವಾರ, 13 ಜೂನ್ 2026
Light
Dark

ನಾಳೆ ಚಾ.ನಗರದಲ್ಲಿ ಗಣಪತಿ ವಿಸರ್ಜನೆ; ಬಿಗಿ ಭದ್ರತೆ

ಚಾಮರಾಜನಗರ: ಇಲ್ಲಿನ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಗುರುನಂಜನಶೆಟ್ಟರ ಛತ್ರದ ಮುಂಭಾಗ ಪೂಜಿಸಲಾಗಿರುವ ಧರ್ಮರಕ್ಷಣಾ ಗಣಪತಿಯ ವಿಸರ್ಜನಾ ಮಹೋತ್ಸವ ನಾನಾ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಶನಿವಾರ ನಡೆಯಲಿದೆ.

ಇದು ೬೦ನೇ ವರ್ಷದ ಗಣೇಶ ವಿಸರ್ಜನೆ. ಗೌರಿಗಣೇಶ ಹಬ್ಬದಂದು ಪ್ರತಿಷ್ಠಾಪಿಸಲಾಗಿತ್ತು. ವಿಸರ್ಜನಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಕರ್ನಾಟಕ, ಕೇರಳದ ಹೆಸರಾಂತ ಕಲಾತಂಡಗಳೊoದಿಗೆ ಮೆರವಣಿಗೆ ಮುಂದಡಿ ಇಡಲಿದೆ.
ಹಲವು ಬೀದಿಗಳಲ್ಲಿ ಸಾಗಿ ಅಂತಿಮವಾಗಿ ತಡರಾತ್ರಿ ದೊಡ್ಡ ಅರಸನ ಕೊಳದಲ್ಲಿ ಗಣಪತಿ ವಿಸರ್ಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಳದ ಸುತ್ತಲೂ ವೈಭವವಾಗಿ ದೀಪಾಲಂಕಾರ ಮಾಡಲಾಗಿದೆ. ಭಾರಿ ಬಿಗಿಭದ್ರತೆಯೊಂದಿಗೆ ವಿಸರ್ಜನೆ ನಡೆಯುವುದರಿಂದ ಪೊಲೀಸ್ ಗಣಪತಿ ಎಂದೇ ಕರೆಯಲಾಗುತ್ತದೆ. ಮೆರವಣಿಗೆ ವೇಳೆ ಕಟ್ಟಡ-ಮಹಡಿ ಏರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷವೂ ಒಂದೊoದು ಹೆಸರಿನಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾ ಬರಲಾಗಿದೆ. ಅಂತೆಯೇ ಈ ಬಾರಿ ಧರ್ಮರಕ್ಷಣಾ ಗಣಪತಿ ಎಂದು ಹೆಸರಿಡಲಾಗಿದೆ. ಪ್ರತಿಷ್ಠಾಪಿಸಿದ ೫೫ ದಿನಗಳಿಗೆ ಸರಿಯಾಗಿ ವಿಸರ್ಜಿಸಲಾಗುತ್ತಿದೆ ಎಂದು ಶ್ರೀ ವಿದ್ಯಾಗಣಪತಿಮಂಡಳಿ ಅಧ್ಯಕ್ಷ ಮನೋಜ್ ಪಟೇಲ್ ಪತ್ರಿಕೆಗೆ ತಿಳಿಸಿದರು.
ಮೆರವಣಿಗೆ ಸಾಗುವ ಬೀದಿಗಳಲ್ಲಿ ಹಳ್ಳಕೊಳ್ಳಗಳನ್ನು ಮುಚ್ಚುವ, ಸ್ವಚ್ಚತೆ ಮಾಡುವ ಕಾರ್ಯ ನಗರಸಭೆಯಿಂದ ಶುಕ್ರವಾರ ಭರದಿಂದ ನಡೆಯಿತು.
ಕಳೆದ ೧ ವಾರದಿಂದ ದಿನಾಲು ಮಳೆಯಾಗುತ್ತಿದ್ದು ವಿಸರ್ಜನೆ ವೇಳೆ ಮಳೆಯಾಗದಿದ್ದರೆ ಸಮಸ್ಯೆ ಇಲ್ಲ. ಬಿದ್ದರೆ ವಿಸರ್ಜನೆ ವಿಳಂಬ ಆಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!