Mysore
32
clear sky

Social Media

ಗುರುವಾರ, 09 ಏಪ್ರಿಲ 2026
Light
Dark

ಗುಂಡ್ಲುಪೇಟೆ | ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯಕ್ಕೆ ಸೇರಿದ ಶ್ರೀಕಂಠಪುರ ಗುಡ್ಡದಲ್ಲಿ ಗಂಡು ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸೋಮವಾರ ಬೆಳಿಗ್ಗೆ ಓಂಕಾರ್ ವಲಯಾರಣ್ಯದ ಶ್ರೀಕಂಠಪುರ ಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಸೋಮೇಶ್ ಹಾಗೂ ವಾಚರ್‌ಗಳು ಗಸ್ತಿನಲ್ಲಿದ್ದರು.

ಈ ವೇಳೆಯಲ್ಲಿ ಸುಮಾರು ೮ ರಿಂದ ೯ ವರ್ಷದ ಹುಲಿಯ ಕಳೇಬರ ಪತ್ತೆಯಾಗಿದೆ. ನಂತರ ಅರಣ್ಯ ಸಿಬ್ಬಂದಿ ವಲಯಾರಣ್ಯಾಧಿಕಾರಿ ಸತೀಶ್ ಅವರ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ಅವರು ಪಶು ವೈದ್ಯರಿಂದ ಹುಲಿಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದರು.

Tags:
error: Content is protected !!