ಮೈಸೂರು : ಸಾಮಾಜಿಕ ಹೋರಾಟಗಾರ,ಪ್ರಗತಿಪರ ಚಿಂತಕ ಪ. ಮಲ್ಲೇಶ್ ಅವರು ಅನಾರೋಗ್ಯ ಕಾರಣದಿಂದಾಗಿ ಇಂದು ನಿಧನಹೊಂದಿದ್ದಾರೆ.
ಪ ಮಲ್ಲೇಶ್ ರವರು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಗೆಳೆಯರಾಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಕೆಲವು ಸಮಯದ ಹಿಂದೆಯಷ್ಟೇ ನಿಧನ ಹೊಂದಿದ್ದಾರೆ.
ನಾಡಿನ ಹಲವಾರು ಸಮಾಜಮುಖಿಗಳು ಹಾಗೂ ಹೋರಾಟಗಾರರೊಂದಿಗೆ ಒಡನಾಟವನ್ನು ಹೊಂದಿದ್ದರು ಪ.ಮಲ್ಲೇಶ್ ರವರು.





