Mysore
22
overcast clouds

Social Media

ಭಾನುವಾರ, 26 ಜುಲೈ 2026
Light
Dark

ಜೆಡಿಎಸ್ ಪಟ್ಟಿ ಬಿಡುಗಡೆ, ಹುಣಸೂರಿಗೆ ಹರೀಶ್ ಗೌಡ ಅಭ್ಯರ್ಥಿ

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಂಧಾನ ಯಶಸ್ವಿಯಾದ ಬೆನ್ನಿಗೇ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಹಿರಿಗೌಡರ ಜತೆ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಹೊರವಲಯದ ರೆಸಾರ್ಟ್ನಲ್ಲಿನಡೆದ ಸಭೆಯಲ್ಲಿ ಪಾಲ್ಗೊಂಡು ವಾಸ್ತವ್ಯ ಹೂಡಿದ್ದ ಎಚ್.ಡಿ.ದೇವೇಗೌಡರು ಶುಕ್ರವಾರ ಜಿಟಿಡಿ ಅವರೊಂದಿಗೆ ಒಂದೇ ಕಾರಿನಲ್ಲಿ ಪಯಣ ಬೆಳೆಸಿದರು. ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿ ಪಂಚರಥಯಾತ್ರೆ ಯಶಸ್ವಿಯಾಗಲು ಶಕ್ತಿ ಕೊಡುವಂತೆ ಪ್ರಾರ್ಥಿಸಿದರು.

ಮೊದಲ ಪಟ್ಟಿ ಪ್ರಕಟ: ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೊರ ಬಂದ ಜಿ.ಟಿ.ದೇವೇಗೌಡರು ದೊಡ್ಡಗೌಡರ ಸಮ್ಮುಖದಲ್ಲೇ ಮೈಸೂರು ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಚಾಮುಂಡೇಶ್ವರಿಗೆ ಜಿಟಿಡಿ, ಹುಣಸೂರಿಗೆ ಜಿ.ಡಿ.ಹರೀಶ್ಗೌಡ, ಕೆ.ಆರ್.ನಗರಕ್ಕೆ ಸಾ.ರಾ.ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ತಿ.ನರಸೀಪುರಕ್ಕೆ ಎಂ.ಅಶ್ವಿನ್ ಕುಮಾರ್,ಎಚ್.ಡಿ.ಕೋಟೆಗೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಹೆಸರು ಅಂತಿಮವಾಗಿದೆ ಎಂದು ಹೇಳಿದರು. ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಿಂದಲೇ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ಮತ್ತು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ ಎಂದರು. ಚಾಮುಂಡೇಶ್ವರಿಗೆ ಎಚ್.ಡಿ.ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೊಂದು ತಿಂಗಳಿನಲ್ಲಿ ನಡೆಯುವ ಶಕ್ತಿಕೊಡು ಅಂತ ಪ್ರಾರ್ಥಿಸಿದ್ದಾರೆ. ಜನವರಿ ತಿಂಗಳಲ್ಲಿ ಎಚ್.ಡಿ.ದೇವೇಗೌಡರು ಚಂಡಿಕಾ ಹೋಮ ನಡೆಸಲಿರುವ ಹಿನ್ನಲೆಯಲ್ಲಿ ನವದುರ್ಗೆಯನ್ನು ಬೇಡಿಕೊಂಡಿದ್ದಾರೆ ಎಂದರು. ಎಚ್.ಡಿ.ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ ಮತ್ತು ಶಕ್ತಿಯಾಗಿದ್ದಾರೆ. ಅವರನ್ನು ಸಂತೋಷವಾಗಿಡುವುದು ಮತ್ತು ಅವರ ಕನಸನ್ನು ನನಸು ಮಾಡುವುದೇ ಗುರಿಯಾಗಿದೆ ಎಂದು ಹೇಳಿದರು.

ಜಿಟಿಡಿ ಕುರಿತು ಅಪಸ್ವರದ ಮಾತಿಗೆ ಅಸ್ಪದವಿಲ್ಲ: ಎಚ್ ಡಿ ಡಿ

ಮೈಸೂರು ಜಿಲ್ಲೆಗೆ ಜಿ.ಟಿ.ದೇವೇಗೌಡರೇ ನಾಯಕರು. ಅವರ ನಾಯಕತ್ವದಲ್ಲೇ ಮುಂದೆ ಪಕ್ಷದ ಎಲ್ಲ ಕಾರ್ಯಗಳು ನಡೆಯುತ್ತವೆ. ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರದ ಮಾತು ಕೇಳಿಬಂದರೂ ನಾನು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಟಿಡಿ ಜಿಲ್ಲೆಗೆ ಬಲಿಷ್ಠ ನಾಯಕ. ಅವರ ಕುರಿತು ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಜಿಲ್ಲೆಯ ಉಸ್ತುವಾರಿವನ್ನು ಕೊಟ್ಟಿದ್ದೇವೆ. ಅವರ ತೀರ್ಮಾನವೇ ಅಂತಿಮ. ಏನಾದರೂ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಜಿಟಿಡಿ ವಿರೋಧಿಗಳಿಗೆ ಸಂದೇಶ ರವಾನಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!