Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಬಿಜೆಪಿಯಿಂದ ಟಿಕೇಟ್‌ ನಿರೀಕ್ಷೆ ಮಾಡಿದ್ದ ಫೈಟರ್‌ ರವಿಗೆ ಶಾಕ್‌ : ಹೊಸ ವರಸೆಗೆ ಸಿದ್ಧತೆ.?

ಮಂಡ್ಯ : ಬಿಜೆಪಿಯಿಂದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಫೈಟರ್‌ ರವಿಗೆ ಬಿಗ್‌ ಶಾಕ್‌ ಉಂಟಾಗಿದೆ. ಶಿವರಾಮೇಗೌಡ ಎಂಟ್ರಿಯಿಂದ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ.ಟಿಕಟ್‌ ಡೌಟ್‌ ಎಂದು ಗೊತ್ತಾಗುತ್ತಿದ್ದಂತೆ ಫೈಟರ್‌ ರವಿ ಬಂಡಾಯವೇಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬಂಡಾಯ ಎದ್ದರೂ ಸರಿಯೇ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಆಪ್ತರೊಂದಿಗೆ ಫೈಟರ್‌ ರವಿ ಹೇಳಿದ್ದಾರೆ ಎನ್ನಲಾಗ್ತಿದೆ.ಯಾರನ್ನೋ ಗೆಲ್ಲಿಸಲು,ಸೋಲಿಸಲು ನಾನು ಬಂದಿದ್ದೇನೆ ಎಂದು ತಮ್ಮ ಆಪ್ತ ವಲಯದಲ್ಲಿ ಫೈಟರ್‌ ರವಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯ ಫೈಟರ್‌ ರವಿಯ ನಡೆ ಬಿಜೆಪಿ ನಾಯಕರಿಗೆ ತಲೆನೋವಾಗಿದೆ.ಈಗಾಗಲೇ ನಾಗಮಂಗಲ ಟಿಕೇಟ್‌ ಸಿಗುವ ಭರವಸೆಯಲ್ಲಿ ಫೈಟರ್‌ ರವಿ ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿದ್ದಾರೆ.ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!