ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಬೇಟೆಗಾರರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಎಲ್ಲಾ ವಿಚಾರ ಎಲ್ಲರಿಗೂ ತಿಳಿಸಲು ಆಗಲ್ಲ. ನನಗೂ ಬೆಳಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಅವರ ಬಳಿ ಇದ್ದ ಬಂದೂಕು ಹಾಗೂ ಎರಡು ಚೀಲ ಮಾಂಸ ವಶಪಡಿಸಿಕೊಂಡಿದ್ದಾರೆ. ಒಬ್ಬ ಎಸ್ಕೇಪ್ ಆಗಿದ್ದಾರೆ. ಮತ್ತಷ್ಟು ಮಾಹಿತಿ ಬರೋದ್ರಲ್ಲಿ ಇದೆ. ಅರಣ್ಯ ಇಲಾಖೆಯವರು ಅವರ ರಕ್ಷಣೆಗೆ ಶೂಟ್ ಮಾಡಿದಾರೆ ಅಂತಿದ್ದಾರೆ. ನಾನು ಜುಡಿಷಿಯಲ್ ತನಿಖೆ ಮಾಡಲು ಹೇಳಿದ್ದೇನೆ. ಮೃತಪಟ್ಟ ಮೂವರಿಗೂ ಪರಿಹಾರ ಕೂಡ ಕೆಲಸ ಮಾಡುತ್ತೇವೆ. ಯಾವ ರೀತಿ ಪರಿಹಾರ ಕೊಡೋದು ಎಂಬುದನ್ನು ಮುಂದೆ ತೀರ್ಮಾನ ಮಾಡಿ ಹೇಳುತ್ತೇವೆ ಎಂದು ಹೇಳಿದರು.




