Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ಓದುಗರ ಪತ್ರ: ಖಾಸಗಿ ಅಂಗಡಿಗಳ ಮಾಲೀಕರಿಂದ ರಸ್ತೆ ಅತಿಕ್ರಮಣ

dgp murder case

ಮೈಸೂರು ನಗರದ ಅಶೋಕ ರಸ್ತೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಶಿವರಾಂ ಪೇಟೆಯ ಹಲವಾರು ಕಡೆಗಳಲ್ಲಿ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂಭಾಗ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯ ಪಾರ್ಕಿಂಗ್ ರಸ್ತೆಯಲ್ಲೇ ಕಬ್ಬಿಣದ ಬಾಕ್ಸ್‌ಗಳನ್ನು ಹಾಕಿದ್ದಾರೆ. ಕೆಲವು ವ್ಯಾಪಾರಿಗಳಂತೂ ತಮ್ಮ ಅಂಗಡಿಗಳ ಮುಂದೆ ಯಾವುದೇ ವಾಹನಗಳನ್ನು ನಿಲುಗಡೆ ಮಾಡಲು ಬಿಡುವುದಿಲ್ಲ. ಸಾರ್ವಜನಿಕರು ಪಾರ್ಕಿಂಗ್ ಮಾಡಲು ಹೋದರೆ, ಅಂಗಡಿ ಮಾಲೀಕರು ಜಗಳಕ್ಕೆ ಬರುತ್ತಾರೆ, ಅಂಗಡಿಯ ಮುಂದಿನ ಜಾಗ ನಮಗೆ ಸೇರಿದ್ದು ಎಂದು ವಾದಿಸುತ್ತಾರೆ, ಈ ವಿಚಾರವನ್ನು ಅಲ್ಲಿನ ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ, ಅಂಗಡಿ ಮುಂದಿನ ರಸ್ತೆಯಲ್ಲಿ ಅಕ್ರಮವಾಗಿ ಹಾಕಿರುವ ಕಬ್ಬಿಣದ ಬಾಕ್ಸ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕರ ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

 

Tags:
error: Content is protected !!