Mysore
26
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಕೆರೆಗೆ ಘನತ್ಯಾಜ್ಯ ಸುರಿಯುವುದನ್ನು ತಡೆಗಟ್ಟಿ

ಓದುಗರ ಪತ್ರ

ಮೈಸೂರಿನ ಅಜ್ಜಯ್ಯನಹುಂಡಿ ಕೆರೆಯ ಬಳಿ ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಘನತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಕೆರೆ ಕಲುಷಿತವಾಗುತ್ತಿದೆ. ವರ್ತುಲ ರಸ್ತೆ ನಿರ್ಮಾಣವಾಗಿದ್ದರಿಂದ ಕೆರೆ ವಿಭಜನೆಯಾಗಿದ್ದು, ಎರಡೂ ಬದಿಗಳಲ್ಲಿರುವ ಕೆರೆಯ ಗಡಿಯನ್ನು ಗುರುತಿಸಿ, ಕಬ್ಬಿಣದ ಬೇಲಿಯನ್ನು ಹಾಕಲಾಗಿತ್ತು. ಕೇರ್ಗಳ್ಳಿ ಪಂಚಾಯಿತಿಯಿಂದ ಪ್ರತಿದಿನವೂ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ.

ಚಾಮುಂಡೇಶ್ವರಿ ವಿದ್ಯುತ್ ನಿಗಮದಿಂದ ಭೂಗತ ಕೇಬಲ್ ಅಳವಡಿಕೆಯ ಸಮಯದಲ್ಲಿ ಬೇಲಿಯನ್ನು ತುಂಡರಿಸಿರುವ ಪರಿಣಾಮ ಕೆರೆಯ ಅಂಗಳವನ್ನು ಪ್ರವೇಶಿಸುವುದು ಸುಲಭವಾಗಿ, ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಈ ಮೊದಲಿನಂತೆ ಕೆರೆಗೆ ಕಬ್ಬಿಣದ ಬೇಲಿಯನ್ನು ನಿರ್ಮಿಸಿ ಕೆರೆಗೆ ತ್ಯಾಜ್ಯವನ್ನು ಸುರಿಯುವುದನ್ನು ತಡೆಗಟ್ಟಬೇಕು ಹಾಗೂ ಕೆರೆಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

-ವೈ.ಕಾಶಿ, ಕನಕದಾಸನಗರ, ಮೈಸೂರು

Tags:
error: Content is protected !!