ಮಾದರಿಯ ನಡೆ!
ಮೊನ್ನೆ ಹುಣಸೂರಿನಲ್ಲಿ ನಡೆದ
ದಲಿತರ ದೇವಸ್ಥಾನ ಪ್ರವೇಶ
ಸಹಪಂಕ್ತಿ ಭೋಜನ
ಮಾದರಿ ನಡೆಯಾಗಿದೆ ನಾಡು-ದೇಶಕೆ!
ಪ್ರೇರಣೆಯಾಗಿದೆ ಮೇಲ್ಪಂಕ್ತಿಯಾಗಿದೆ
ಅಸ್ಪೃಶ್ಯತೆ ಅಳಿದು ಸಮಾನತೆ ಚಿಗುರಲು!
ಮುಂದಾಗಲಿ ಮೇಲ್ವರ್ಗದವರು
ಜಾತಿತಾರತಮ್ಯ ತೊಡೆಯಲು
ಎದೆಯಂಗಳದಲಿ ಸಮಾನತೆಯ
ಬೀಜವ ಬಿತ್ತಲು!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು



