ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದು ನಾಚಿಕೆಗೇಡಿನ ವಿಷಯ. ಇನ್ನೂ ಒಳಹೊಕ್ಕು ನೋಡಿದರೆ ಕನ್ನಡಿಗರಿಗೂ ಅವಮಾನ ಮಾಡಿದ ಹಾಗಿದೆ.
ಈ ಘಟನೆ ೨೧ನೇ ಶತಮಾನದಲ್ಲಿ, ಅದೂ ಪ್ರಜಪ್ರಭುತ್ವದ ಭಾರತದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆಯ ಅಮಾನುಶ ಕೃತ್ಯದ ಮುಖವನ್ನು ಬಯಲು ಮಾಡಿದೆ. ದಲಿತ ನಾಯಕರು ಉನ್ನತದ ಹುದ್ದೆಗೆ ಏರಿದಾಗಲೇ ಜತಿ ತಾರತಮ್ಯ, ದೌರ್ಜನ್ಯ ನಡೆಯುತ್ತಿರುವುದು ಅಸಹನೀಯವಾಗಿದೆ.
ಈ ರೀತಿಯ ಘಟನೆಗೆ ಕಾರಣರಾದವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲು ಮಾಡಿದರೆ ಮುಂದೆ ಇಂತಹ ಘಟನೆಗಳು ನಡೆಯಲು ಆಸ್ಪದ ಇರುವುದಿಲ್ಲ. ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣ ಲೇಸಲ್ಲವೇ?
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ.ಕೋಟೆ ತಾಲ್ಲೂಕು


