Mysore
27
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಓದುಗರ ಪತ್ರ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದು ನಾಚಿಕೆಗೇಡಿನ ವಿಷಯ. ಇನ್ನೂ ಒಳಹೊಕ್ಕು ನೋಡಿದರೆ ಕನ್ನಡಿಗರಿಗೂ ಅವಮಾನ ಮಾಡಿದ ಹಾಗಿದೆ.

ಈ ಘಟನೆ ೨೧ನೇ ಶತಮಾನದಲ್ಲಿ, ಅದೂ ಪ್ರಜಪ್ರಭುತ್ವದ ಭಾರತದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆಯ ಅಮಾನುಶ ಕೃತ್ಯದ ಮುಖವನ್ನು ಬಯಲು ಮಾಡಿದೆ. ದಲಿತ ನಾಯಕರು ಉನ್ನತದ ಹುದ್ದೆಗೆ ಏರಿದಾಗಲೇ ಜತಿ ತಾರತಮ್ಯ, ದೌರ್ಜನ್ಯ ನಡೆಯುತ್ತಿರುವುದು ಅಸಹನೀಯವಾಗಿದೆ.

ಈ ರೀತಿಯ ಘಟನೆಗೆ ಕಾರಣರಾದವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲು ಮಾಡಿದರೆ ಮುಂದೆ ಇಂತಹ ಘಟನೆಗಳು ನಡೆಯಲು ಆಸ್ಪದ ಇರುವುದಿಲ್ಲ. ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣ ಲೇಸಲ್ಲವೇ?

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ.ಕೋಟೆ ತಾಲ್ಲೂಕು 

 

Tags:
error: Content is protected !!