ಕುವೆಂಪು
ಮಲೆನಾಡಿನಲಿ ಹುಟ್ಟಿದರು
ಮೈಸೂರಿಗೆ ಕಾಲಿಟ್ಟರು
ಕವಿಯಾಗಿ ಕನ್ನಡದ ಮೊದಲ
ಜ್ಞಾನಪೀಠ ಗಳಿಸಿದರು
ಮೂಢನಂಬಿಕೆಯನು ಬದಿಗೊತ್ತಿ
ವಿಜ್ಞಾನದ ಬೀಜ ಬಿತ್ತಿ
ಜಾತಿಮತದ ಬೇರ ಕಿತ್ತಿ
ವಿಶ್ವಮಾನವ ಸಂದೇಶ ಸಾರಿದರು
ಅವರೇ ನಮ್ಮ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
-ಇಳಾ ಪೂಧ್, ೬ನೇ ತರಗತಿ, ಮಹಾಬೋಧಿ ಶಾಲೆ, ಸರಸ್ವತಿಪುರಂ, ಮೈಸೂರು





