Mysore
21
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಭಾರತದಲ್ಲಿ ಹೀಗೆ ಪ್ರತಿಭಟನೆ ಸಾಧ್ಯವೇ?

ಓದುಗರ ಪತ್ರ

ದೇಶವೊಂದರ ಮುಖ್ಯಸ್ಥ ಇನ್ನೊಂದು ದೇಶದ ವಿರುದ್ಧ ಯುದ್ಧ ಸಾರಿದ್ದಾರೆ. ಈ ಸಂಘರ್ಷದಲ್ಲಿ ತಮ್ಮ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದರ ಅರಿವಿದ್ದರೂ ಆತನದ್ದು ಅಪಾರ ಅಹಂಕಾರ. ಇಂತಹ ಸರ್ವಾಧಿಕಾರಿ ಧೋರಣೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೂ ಮುಂದಾಗಿರುವ ಮುಖ್ಯಸ್ಥನ ವಿರುದ್ಧ ಇಡೀ ದೇಶವೇ ತಿರುಗಿಬಿದ್ದಿದೆ. ಎಲ್ಲ ವಯೋಮಾನದವರೂ ಪ್ರತಿಭಟನೆಯ ಅಸ್ತ್ರ ಹಿಡಿದು ಬೀದಿಗಿಳಿದಿದ್ದಾರೆ. ಮುಖ್ಯಸ್ಥನ ಪ್ರತಿಕೃತಿಯನ್ನು ದಹಿಸಿದ್ದಾರೆ. ಸಿಕ್ಕಿದ್ದರೆಲ್ಲೆಲ್ಲ ಆತನ ಚಿತ್ರಪಟಕ್ಕೆ ಹೊಡೆಯುತ್ತಿದ್ದಾರೆ. ನಮಗೆ ರಾಜಪ್ರಭುತ್ವ ಬೇಕಿಲ್ಲ; ಪ್ರಜಾಪ್ರಭುತ್ವ ಬೇಕು ಎಂದು ಗುಡುಗಿದ್ದಾರೆ. ಹಾಗಿದ್ದರೂ ಯುದ್ಧದಿಂದ ಹಿಂದೆ ಸರಿಯುವ ಜನಪರ, ಜೀವಪರ ಚಿಂತನೆ ಆತನಿಗಿಲ್ಲ. ಆದರೆ, ಜನಾಕ್ರೋಶವನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದು ಆ ಮುಖ್ಯಸ್ಥನಿಗೆ ಅರ್ಥ ಆಗಿದ್ದಂತೆ ಇಲ್ಲ. ಇದು ಯಾವ ದೇಶದ ಕಥೆ ನಿಮಗೆ ಗೊತ್ತಾಯಿತೆ? ಇದು ಅಮೆರಿಕ ದೇಶದ ಪರಿಸ್ಥಿತಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಟ್ಟಹಾಸದ ಪರಿಣಾಮ.

ಭಾರತದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಇಲ್ಲಿಯೂ ಅಮೆರಿಕದಂತಹ ಪ್ರತಿಭಟನೆಗಳು ನಡೆಯುವುದು ಸಾಧ್ಯವೆ? ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಜನರು ಆಕ್ರೋಶ ವ್ಯಕ್ತಪಡಿಸಲು ಅವಕಾಶ ಇದೆಯೇ? ಜನಪರ ಹೋರಾಟಗಾರರು ಜೈಲಿಗೆ ಹೋಗದೇ ತಪ್ಪಿಸಿಕೊಳ್ಳಲು ಅವಕಾಶ ಇದೆಯೇ? ಎಲ್ಲರೂ ಯೋಚಿಸಬೇಕಾದ ಜರೂರತ್ತು ಇದೆ.

ರಾಜಶೇಖರ್, ಜನತಾನಗರ, ಮೈಸೂರು

Tags:
error: Content is protected !!