Mysore
23
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಓದುಗರ ಪತ್ರ: ದಂಡ ವಸೂಲಿಯೇ ಪೊಲೀಸರ ಆದ್ಯತೆ ಆಗಬಾರದು

ಸಾಂಸ್ಕೃತಿಕ ನಗರಿ, ಅರೆಮನೆ ನಗರಿ, ಸ್ವಚ್ಛನಗರಿ, ಹಿರಿಯ ನಾಗರಿಕರ ಸ್ವರ್ಗ ಎಂದೆಲ್ಲಾ ಹೆಸರುವಾಸಿಯಾಗಿರುವ ಮೈಸೂರಿನಲ್ಲೂ ಈಗಿನ ಕಾನೂನು ವ್ಯವಸ್ಥೆಯ ಬಗ್ಗೆ ಯೋಚಿಸಬೇಕಾದ ಸಂಗತಿಗಳು ನಡೆಯುತ್ತಿವೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಆತಂಕ ಮೂಡಿಸುವ ಘಟನೆಗಳು ಕಡಿಮೆಯಾಗು ತ್ತಿಲ್ಲವೇನೋ ಎಂಬ ಚಿಂತಿಯೂ ಶಾಂತಿಪ್ರಿಯರನ್ನು ಕಾಡುತ್ತಿದೆ.

ಅಲ್ಲದೆ ನಗರದಲ್ಲಿ ಆನೇಕ ದ್ವಿಚಕ್ರ ವಾಹನಗಳು ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿವೆ. ನಾನಾ ಕಡೆ ವಾಹನಗಳಿಗೆ ದಂಡ ಹಾಕುವ ಉತ್ಸಾಹ ಸಂಚಾರ ಪೊಲೀಸರು ತೋರುತ್ತಿದ್ದರೂ ನಂಬರ್ ಪ್ಲೇಟ್ ಇಲ್ಲದ, ಹೆಲ್ಮೆಟ್ ಧರಿಸದ, ಏಕಮುಖ ರಸ್ತೆಯನ್ನೂ ಲೆಕ್ಕಕ್ಕಿಡದೆ ಆನೇಕ ವಾಹನಗಳು ಓಡಾಡುವುದನ್ನೂ ಕಾಣಬಹುದು. ಪೊಲೀಸರನ್ನು ಕಂಡರೆ ಹಿಂತಿರುಗಿಸಿಕೊಂಡು, ಇಲ್ಲವೆ ಹೇಗೋ ಪಾರಾಗಿ ಹೋಗುವ ಚತುರರೂ ಇರುತ್ತಾರೆ. ದಂಡ ವಸೂಲಿಯೊಂದೇ ಗುರಿಯಾಗಿಟ್ಟುಕ್ಕೊಳ್ಳದೆ ದ್ವಿಚಕ್ರವಾಹನ ಸವಾರರು ಹಾಗೂ ಒಟ್ಟಾರೆ ವಾಹನ ಸವಾರರು ಸಂಚಾರ ನಿಯಮ ಪಾಲಿಸುವ ಭಯ ಇಲ್ಲವೆ ಶಿಸ್ತು ಮೂಡುವಂತೆ ಮಾಡಿದರೆ ಅದು ಶ್ಲಾಘನೀಯ ಕೆಲಸವಾಗುತ್ತದೆ.

ನಂಬರ್ ಪ್ಲೇಟ್ ಇಲ್ಲದೇ ರಸ್ತೆಗಳಲ್ಲಿ ವಾಹನಗಳು ಓಡಾಡಬವಂತಾದರೆ ಸಮಾಜಘಾತುಕ ಕೆಲಸಗಳಿಗೆ ಅನುವು ಮಾಡಿಕೊಟ್ಟಂತಲ್ಲವೇ? ಸರಗಳ್ಳರು, ದರೋಡೆ, ಸಮಾಜಘಾತುಕ ಕೃತ್ಯ ಏಸಗುವವರಿಗೆ ಇದು ಅನುಕೂಲವಾಗುತ್ತದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಮೈಸೂರಿನಲ್ಲಿ ಆದಷ್ಟು ಶಾಂತಿ ಹಾಗೂ ಸಂಯಮದ ವಾತಾವರಣ ಮುಂದುವರಿಯುವಂತೆ ನೋಡಿಕೊಳ್ಳಬೇಕು.

-ಹೆಚ್. ಪಿ. ಮಹದೇವಸ್ವಾಮಿ ಹೊರಳಹಳ್ಳಿ, ತಿ. ನರಸೀಪುರ ತಾಲ್ಲೂಕು

Tags:
error: Content is protected !!