Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಓದುಗರ ಪತ್ರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ ಸೇತುವೆಯ ಇಕ್ಕೆಲದಲ್ಲಿ ನಿರ್ಮಿಸಿರುವ ತಡೆಗೋಡೆಗಳು ಬಹುತೇಕ ಮುರಿದುಬಿದ್ದಿವೆ. ಹಾಗಾಗಿ ಸೇತುವೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆಯು ದಡದಹಳ್ಳಿ ದಾಟಿ ಮೈಸೂರಿಗೂ ಸಂಪರ್ಕಗೊಂಡಿದೆ. ಇಲ್ಲಿ ದ್ವಿಚಕ್ರ ವಾಹನಗಳು, ನಾಲ್ಕುಚಕ್ರ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಸೇತುವೆಯ ಬಳಿಯಲ್ಲಿ ರಸ್ತೆಯ ಡಾಂಬರು ಕಿತ್ತುಹೋಗಿ ಹಳ್ಳ-ಕೊಳ್ಳಗಳು ತಲೆಯೆತ್ತಿವೆ. ತಡೆಗೋಡೆಗಳೂ ಮುರಿದುಬಿದ್ದಿರುವ ಕಾರಣ ಅಪಘಾತ ಸಂಭವಿಸಬಹುದು. ಸ್ವಲ್ಪ ಹೆಚ್ಚುಕಡಿಮೆಯಾದರೂ ವಾಹನಗಳು ಎಣ್ಣೆಹೊಳೆಗೆ ಬೀಳುವಂತಹ ಸನ್ನಿವೇಶ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಽಗಳು ಅಪಘಾತ ಸಂಭವಿಸುವ ಮೊದಲೇ ಎಚ್ಚೆತುಕೊಂಡು, ಈ ಸೇತುವೆಯ ದುರಸ್ತಿಗೆ ಕ್ರಮವಹಿಸಬೇಕು.

-ಮಂಜುನಾಥ್, ಕಡಕೊಳ, ಮೈಸೂರು ತಾ.

Tags:
error: Content is protected !!