ಮೈಸೂರಿನಲ್ಲಿ ೧೯೧೨ರಲ್ಲಿ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ರೇಷ್ಮೆ ಉದ್ಯಮವು ಜಾಗತಿಕ ಮಟ್ಟದಲ್ಲಿ ಮೈಸೂರು ಸಿಲ್ಕ್ ಸೀರೆ ಹೆಸರಿನಲ್ಲಿ ಹೆಸರುವಾಸಿಯಾಗಿದ್ದು, ಸಿಲ್ಕ್ ಸೀರೆ ತಯಾರಿಸಲು ಕಚ್ಚಾ ರೇಷ್ಮೆ ಒದಗಿಸುತ್ತಿರುವ (ತಿ.ನರಸೀಪುರದಲ್ಲಿ ಇರುವ) ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಆತುರಾತುರವಾದ ನಿರ್ಧಾರ ಮಾಡಿ ಬೌಂಡರಿ ಗುರುತಿಸಿ ಸಿಲ್ಕ್ ಫಿಲೇಚರ್ ಮುಚ್ಚಲು ಮುಂದಾಗಿರುವುದು ವಿಪರ್ಯಾಸವೇ ಸರಿ.
ಈ ಸಿಲ್ಕ್ ಫಿಲೇಚರ್ ರೇಷ್ಮೆ ನೂಲಿನ ಎಳೆ(ಕಚ್ಚಾ ರೇಷ್ಮೆ)ಯನ್ನು ತಯಾರಿಸಿ ಮೈಸೂರಿನ ರೇಷ್ಮೆ ಕಾರ್ಖಾನೆಗೆ ಹಾಗೂ ಚನ್ನಪಟ್ಟಣದ ರೇಷ್ಮೆ ಕಾರ್ಖಾನೆಗೆ ಸರಬರಾಜು ಮಾಡಿ ಮೈಸೂರು ಸಿಲ್ಕ್ ಸೀರೆಗಳ ಉತ್ಪಾದನೆಗೆ ನೆರವಾಗುತ್ತಿತ್ತು. ಸರ್ಕಾರ ಕೂಡಲೇ ಕ್ರೀಡಾಂಗಣ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ಬಳಸಬೇಕು ಹಾಗೂ ಸಿಲ್ಕ್ ಫಿಲೇಚರ್ನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಜಾಗತಿಕ ಮನ್ನಣೆ ಪಡೆದಿರುವ ನಮ್ಮ ಮೈಸೂರು ಸಿಲ್ಕ್ ಸೀರೆ ಉದ್ಯಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





