ಆಧುನಿಕ ಕನ್ನಡ ಕಾವ್ಯರಂಗದಲ್ಲಿ ಕುವೆಂಪು, ಬೇಂದ್ರೆ, ಪು.ತಿ.ನರಸಿಂಹಾಚಾರ್ – ಈ ಮೂವರನ್ನು ಒಟ್ಟಿಗೆ ‘ರತ್ನತ್ರಯ’ ಎಂದು ಕರೆಯುವುದು ರೂಢಿ. ಇವರಲ್ಲಿ ಕುವೆಂಪು, ಬೇಂದ್ರೆಯವರಿಗೆ ವಿಶಿಷ್ಟ ಅಭಿಧಾನಗಳೂ ಉಂಟು: ಕುವೆಂಪು- ರಾಷ್ಟ್ರಕವಿ; ಬೇಂದ್ರೆ- ವರಕವಿ. ಆದರೆ ಪುತಿನ ಅವರಿಗೆ ಅಂಥ ವಿಶೇಷಣವೇನೂ ಇಲ್ಲ! ಆದ್ದರಿಂದ, ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರಿಗೆ ನಾನು ವಿಶೇಷಣವೊಂದನ್ನು ಅನ್ವೇಷಿಸಿ, ಹಚ್ಚಿದೆ: ‘(ಮೇಲುಕೋಟೆಯ) ಮೇರು ಕವಿ’. ಅದು ಪ್ರಚಲಿತವಾಗುವುದು ಅಪೇಕ್ಷಣೀಯ! ಮಾಧುರ್ಯ: ಇತ್ತೀಚಿನ ಬೆಳವಣಿಗೆ: ಮಧುಚಂದ್ರದ ನೆಪದಲ್ಲಿ ಹತ್ಯೆ! ಅಂಥ ಕಾಮಿನಿಯರನ್ನು ‘ಮೃತ್ಯು ಮಾಧುರಿಯರು’ ಎಂದು ಕರೆಯಬಹುದೆ? (ಕುವೆಂಪು ಮಾತು).
-ಸಿಪಿಕೆ, ಮೈಸೂರು





