Mysore
33
scattered clouds

Social Media

ಮಂಗಳವಾರ, 26 ಮೇ 2026
Light
Dark

ಸರ್ವ ಪೋಷಕರ ಸಭೆ ಕರೆಯಲು ಸಿದ್ಧತೆ

ಅಲಕೆರೆ ಶಾಲೆ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ವಿವಾz

ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಮೊಟ್ಟೆ ವಿತರಿಸುವ ವಿವಾದ ಸಂಬಂಧ ಆಂದೋಲನ ಪತ್ರಿಕೆ ಬೆಳಕು ಚೆಲ್ಲಿದ ಬಳಿಕ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆಂದು ತಿಳಿದು ಬಂದಿದೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮದ ಮುಖಂಡರೊಂದಿಗೆ ಈ ವಿಚಾರದ ಕುರಿತು ದೂರವಾಣಿ ಯಲ್ಲಿ ಮಾತನಾಡಿ, ಶಾಸಕ ರವಿಕುಮಾರ್ ಗಣಿಗ ಹಾಗೂ ಜಿಲ್ಲಾಧಿಕಾರಿಗಳಿಗೆ ಆಲಕೆರೆ ಶಾಲೆಯ ಮೊಟ್ಟೆ ವಿವಾದವನ್ನು ಅಂತ್ಯಗೊಳಿಸಲು ಮುಂದಾಗುವಂತೆ ತಿಳಿಸಿದ್ದಾರೆಂದು ಹೇಳಲಾಗಿದೆ.

ಸೋಮವಾರ ಮದ್ದೂರಿನಲ್ಲಿ ಮುಖ್ಯ ಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ಮಂಗಳವಾರ ಅಥವಾ ಬುಧವಾರ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊ ಟ್ಟಿಗೆ ಗ್ರಾಮಕ್ಕೆ ಭೇಟಿ ನೀಡಿ ಪೋಷಕರ ಸಮ್ಮುಖದಲ್ಲಿ ವಿವಾದ ಇತ್ಯರ್ಥ ಗೊಳಿಸಲು ಮುಂದಾಗಿದ್ದಾರೆಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

Tags:
error: Content is protected !!