5ನೇ ವರ್ಷದ ಒಕ್ಕಲಿಗರ ಕಪ್ ಪಂದ್ಯಾವಳಿ; 3 ದಿನಗಳ ಕಾಲ ಸೋಮವಾರಪೇಟೆಯಲ್ಲಿ ಕಬಡ್ಡಿ ರಸದೌತಣ
• ಲಕ್ಷ್ಮಿಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಕಬಡ್ಡಿ ಕ್ರೀಡೆಯ ತವರೂರು ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆಯ ಸೋಮವಾರಪೇಟೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಏ.11ರ ಶುಕ್ರವಾರದಿಂದ 13ರ ಭಾನುವಾರದವರೆಗೆ 3 ದಿನಗಳ ಕಾಲ ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ 5ನೇ ವರ್ಷದ ರಾಷ್ಟ್ರಮಟ್ಟದ ಒಕ್ಕಲಿಗರ ಕಪ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ವಿಶೇಷವಾಗಿ ಈ ಬಾರಿ ಮಹಿಳಾ ಆಟಗಾರರ ತಂಡಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದ
ರೊಂದಿಗೆ ಕೊಡಗು ಜಿಲ್ಲೆಯ ಕಬಡ್ಡಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯೂ ನಡೆಯಲಿದೆ.
ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ಪೊಲೀಸ್, ಬಿಪಿಸಿಎಲ್ ಮುಂಬೈ, ಎನ್ಯುಎಸ್ಇ ಹರಿಯಾಣ, ಬಾರಾಮುಲ್ಲಾ ಸೊಲ್ಲಾಪುರ, ಕಸ್ಟಮ್ಸ್ ಚೆನ್ನೈ, ಜಿ.ಕೆ.ಅಕಾಡೆಮಿ ಮುಂಬೈ, ಬ್ಯಾಂಕ್ ಆಫ್ ಕರ್ನಾಟಕದ ಎರಡು ತಂಡಗಳು, ಎಡಬ್ಲ್ಯುಎಫ್ ಮುಂಬೈ, ಉತ್ತರಾಖಂಡ್, ತಮಿಳುನಾಡಿನ ತಮಿಳ್ ತಲೈವ, ತಮಿಳುನಾಡು ಪೊಲೀಸ್, ಐಸಿಎಫ್ ಡೆಲ್ಲಿ, ಗೋವಾ, ಸಾಯಿ ಸುಪ್ರಿತ್ ಹರಿಯಾಣ ತಂಡಗಳು ಭಾಗವಹಿಸಲಿವೆ.
ಇದರೊಂದಿಗೆ ಪ್ರತ್ಯೇಕ ವಿಭಾಗದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಹಿಳಾ ಆಟಗಾರರ ತಂಡ ಗಳು ಸ್ಪರ್ಧಿಸಲಿವೆ. ಕೊಡಗು ಜಿಲ್ಲಾಮಟ್ಟದಲ್ಲಿಯೂ ಪಂದ್ಯಾವಳಿ ನಡೆಯಲಿದ್ದು, ತಾತ್ಕಾಲಿಕವಾಗಿ 2 ಮ್ಯಾಟ್ ಮೈದಾನಗಳನ್ನು ಸಿದ್ಧಪಡಿಸಲಾಗಿದೆ. 12 ಸಾವಿರ ಮಂದಿ ಕುಳಿತುಕೊಳ್ಳಲು ಅವಕಾಶವಾಗು ವಂತೆ ಗ್ಯಾಲರಿ ನಿರ್ಮಾಣವಾಗಿದೆ.
ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 2 ಲಕ್ಷ ರೂ, ದ್ವಿತೀಯ ಬಹುಮಾನವಾಗಿ 1 ಲಕ್ಷ ರೂ., ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ತಲಾ 50 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು.
ಮಹಿಳೆಯರ ವಿಭಾಗದ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನವಾಗಿ 30 ಸಾವಿರ ರೂ., ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ತಲಾ 15 ಸಾವಿರ ರೂ.ನಗದು ಹಾಗೂ ಟ್ರೋಫಿಗಳನ್ನು ನೀಡಲಾಗುವುದು.
ಕೊಡಗು ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ 20 ಸಾವಿರ ರೂ.ನಗದು, ದ್ವಿತೀಯ ಬಹುಮಾನವಾಗಿ 10 ಸಾವಿರರೂ ಹಾಗೂತೃತೀಯ ಬಹುಮಾನವಾಗಿ 5 ಸಾವಿರ ರೂ.ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.
ಏ.11 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಮಟ್ಟದ ಪಂದ್ಯಾವಳಿಗಳು ಆರಂಭಗೊಳ್ಳಲಿವೆ. ಸಂಜೆ 5 ಗಂಟೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಗಳು ನಡೆಯಲಿವೆ. ಅಮೆಚೂರ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರು ಭಾಗವಹಿಸಲಿದ್ದಾರೆ.
ಪ್ರೊ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗಿಯಾಗಿರುವ 30ಕ್ಕೂ ಅಧಿಕ ಆಟಗಾರರು ಈ ಪಂದ್ಯಾ ವಳಿಯಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿ ಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9448218525, 9964806752 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಉದಯೋನ್ಮುಖ ಕ್ರೀಡಾಪಟುಗಳು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಆಟಗಾರರು
ಒಕ್ಕಲಿಗರ ಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆಯಲಿದೆ. ಈ ಬಾರಿ ಮಹಿಳಾ ಆಟಗಾರರ ತಂಡಕ್ಕೂ ಅವಕಾಶ ಕಲ್ಪಿಸಲಾಗಿದೆ.ಕೊಡಗು ಜಿಲ್ಲೆಯ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯೂ ನಡೆಯಲಿದೆ. -ಬಿ.ಜೆ. ದೀಪಕ್, ಸ್ಥಾಪಕ ಅಧ್ಯಕ್ಷರು, ಒಕ್ಕಲಿಗರ ಯುವ ವೇದಿಕೆ, ಸೋಮವಾರಪೇಟೆ




