Mysore
23
overcast clouds

Social Media

ಗುರುವಾರ, 30 ಜುಲೈ 2026
Light
Dark

ಧ್ರುವರ ಹೆಸರಿಗೆ ಹೊಳಪು ನೀಡುವ ಅಭಿಮಾನಿ ಬಳಗ

ಎಸ್.ಎಸ್.ಭಟ್ಟ

ನಾಳೆ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜನೆ 

ನಂಜನಗೂಡು: ಮಾಜಿ ಸಂಸದರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯದಾದ್ಯಂತ ಸಂಚರಿಸಿ ಮೂರು ವರ್ಷಗಳ ಹಿಂದೆ ಅಗಲಿರುವ ಆರ್.ಧ್ರುವನಾರಾಯಣ ಇಂದಿಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದಾದ್ಯಂತ ಜನಾನುರಾಗಿ. ಜನಪ್ರತಿನಿಧಿ ಎಂದರೆ ಧ್ರುವರಂತೆ ಇರಬೇಕು ಎಂದು ಪಕ್ಷಾತೀತವಾಗಿ ಕರೆಸಿಕೊಳ್ಳುವಷ್ಟು ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡಿದ್ದ ಧ್ರುವರ ಹೆಸರನ್ನು ಈ ಭಾಗದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸವನ್ನು ಅವರ ಅಭಿಮಾನಿ ಬಳಗ ಕೈಗೊಂಡಿದೆ. ಅದರ ಪ್ರತಿಫಲವೇ ಧ್ರುವರ ಜನ್ಮದಿನೋತ್ಸವದ ಅಂಗವಾಗಿ ನಡೆಯುತ್ತಿರುವ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರಗಳು.

೨ ವರ್ಷಗಳಿಂದ ನಡೆದಿರುವ ಉದ್ಯೋಗ ಮೇಳದಿಂದ ಕ್ಷೇತ್ರದ ಸಾಕಷ್ಟು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿರುವ ಧ್ರುವನಾರಾಯಣರ ಅಭಿಮಾನಿ ಬಳಗ, ಉದ್ಯೋಗ ದೊರಕಿಸುವುದರ ಜೊತೆ ಅವರ ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಾ ಅವರನ್ನು ಪ್ರತಿಷ್ಠಿತ ಕಂಪೆನಿಗಳ ಉದ್ಯೋಗದ ಸಂದರ್ಶನಕ್ಕೆ ಅಣಿಗೊಳಿಸಿ, ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೈಂಕರ್ಯವನ್ನು ಕೈಗೊಂಡಿರುವುದು ಧ್ರುವನಾರಾಯಣರ ಅಭಿಮಾನಿ ಬಳಗದ ಹೆಗ್ಗಳಿಕೆಯಾಗಿದೆ. ಅಲ್ಲದೆ ನೀಟ್, ಸಿಇಟಿ ತರಬೇತಿಯನ್ನೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವುದು ರಾಜಕೀಯ ಧ್ರುವತಾರೆಯಾಗಿ ಬೆಳಗಿದ ಧ್ರುವರ ಹೆಸರಿನ ಅಭಿಮಾನಿಗಳ ಸಾರ್ಥಕ ಸೇವೆಯಾಗಿದೆ.

ಈ ಸೇವೆಯ ಹಿಂದೆ ಇರುವವರು ನಂಜನಗೂಡಿನ ಶಾಸಕ, ಧ್ರುವನಾರಾಯಣರ ಪುತ್ರ ದರ್ಶನ್ ಧ್ರುವನಾರಾಯಣ ಹಾಗೂ ಧ್ರುವರ ಹತ್ತಿರದ ಸಂಬಂಧಿ ನಂಜನಗೂಡಿನ ಮಾಜಿ ಶಾಸಕ ಕಳಲೆ ಕೇಶವಮೂರ್ತಿ. ಅವರಿಬ್ಬರ ದೂರದೃಷ್ಟಿಯ ಫಲವೇ ಪ್ರತಿವರ್ಷದ ಉದ್ಯೋಗ ಮೇಳ, ವಿದ್ಯಾರ್ಥಿಗಳ ತರಬೇತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳ ಕೊಡುಗೆ, ಇಂತಹ ಉದಾತ್ತ ಧೋರಣೆಯ ಸಮಾಜಮುಖಿ ಕಾರ್ಯಕ್ರಮವನ್ನು ಇದೇ ಮೊದಲಬಾರಿಗೆ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತಿದ್ದು, ಅದರ ಪ್ರತೀಕವೇ ಧ್ರುವನಾರಾಯಣರ ಜನ್ಮದಿನ ಜುಲೈ ೩೧ರಂದು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ. ಹಿಂದೆ ೧,೪೦೦ ಜನರ ಉದ್ಯೋಗಕ್ಕೆ ನೆರವಾಗಿದ್ದ ಧ್ರುವನಾರಾಯಣ ಹೆಸರಿನ ಉದ್ಯೋಗ ಮೇಳದಲ್ಲಿ ಈ ಬಾರಿ ೫೦೦ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸುವ ಮಹತ್ವಾಕಾಂಕ್ಷೆ ಉದ್ಯೋಗ ಮೇಳದ್ದಾಗಿದೆ.

Tags:
error: Content is protected !!