ತೆಲಂಗಾಣದಲ್ಲಿ ೩೦,೦೦೦ ಕೆ.ಜಿ. ನಕಲಿ ಮಸಾಲೆ ಜಪ್ತಿಯಾಗಿರುವುದು ಕೇವಲ ಎಚ್ಚರಿಕೆಯಲ್ಲ ನಮಗಿದು ನೇರ ಬೆದರಿಕೆ! ಮಸಾಲೆ, ಹಾಲು, ಎಣ್ಣೆ ಹಾಗೂ ತರಕಾರಿ ಸೇರಿದಂತೆ ಪ್ರತಿಯೊಂದು ನಿತ್ಯಬಳಕೆಯ ಆಹಾರದಲ್ಲೂ ಕಲಬೆರಕೆ ಮಾಫಿಯಾ ಹರಡಿದೆ. ಎಫ್ ಎಸ್ ಎಸ್ಎಐ ವರದಿಗಳ ಪ್ರಕಾರ ದೇಶದಲ್ಲಿ ಶೇಕಡಾ ೪೦ ರಷ್ಟು ಆಹಾರ ಮಾದರಿಗಳು ಅಪಾಯಕಾರಿ ಕಳಪೆಯಾಗಿವೆ.
ಹಾಲಿಗೆ ಯುರಿಯಾ, ಎಣ್ಣೆಗೆ ಅಪಾಯಕಾರಿ ರಾಸಾಯನಿಕ ಹಾಗೂ ತರಕಾರಿಗಳಿಗೆ ಕ್ಯಾನ್ಸರ್ ತರುವ ಬಣ್ಣ ಸೇರಿಸುವುದು ಸಮಾಜದ ವಿರುದ್ಧ ನಡೆಯುತ್ತಿರುವ ಆಹಾರ ಭಯೋತ್ಪಾದನೆ. ಕರ್ನಾಟಕ ಸರ್ಕಾರವು ಕೇವಲ ನೀರು ಪರೀಕ್ಷೆಯಂತಹ ಜಗೃತಿಗೆ ಸೀಮಿತವಾಗದೆ ತೆಲಂಗಾಣದಂತೆ ವಿಶೇಷ ಪಡೆ ರಚಿಸಿ ತಾಲ್ಲೂಕುವಾರು ಕಟ್ಟುನಿಟ್ಟಿನ ದಾಳಿ ನಡೆಸಬೇಕು.
ಸರ್ಕಾರ ನಕಲಿ ಜಲವನ್ನು ಬೇರುಸಹಿತ ಕಿತ್ತೊಗೆಯಬೇಕು. ನಕಲಿ ದಂಧಕೋರರಿಗೆ ಜೀವಾವಽ ಶಿಕ್ಷೆಯಾಗುವಂತಹ ಕಠಿಣ ಕಾನೂನು ಕ್ರಮ ತಕ್ಷಣವೇ ಜರಿಯಾಗಬೇಕು.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು




