Mysore
29
overcast clouds

Social Media

ಶನಿವಾರ, 27 ಜೂನ್ 2026
Light
Dark

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ
ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ ಅವರು ಅನೇಕ ಹೋರಾಟಗಳನ್ನು ಮಾಡಿದರು. ಗಾಂಧೀಜಿ ಅವರನ್ನು ಈ ದೇಶದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ರಾಷ್ಟ್ರೀಯ ಚಳವಳಿಯ ನಾಯಕರಾಗಿ ದ್ದರು. ರಾಜಕೀಯ ನೀತಿಶಾಸಜ್ಞರು, ವಸಾಹತುಶಾಹಿ ವಿರೋಧೀ, ರಾಷ್ಟ್ರೀಯತಾವಾದಿ ಆಗಿದ್ದ ಗಾಂಧೀಜಿ ಚಿಕ್ಕ ವಯಸ್ಸಿ ನಿಂದಲೇ ಜೀವಿಗಳಿಗೆ ಹಾನಿಯಾಗದಂತೆ ಇರು ವುದು, ಸಹನೆಯಿಂದ ಇರುವುದನ್ನು ಕಲಿತರು. ಗಾಂಽಜಿ ತರಗತಿಯಲ್ಲಿ ಅಥವಾ ಆಟದ ಮೈದಾನದಲ್ಲಿ ಮಿಂಚುವ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಅವರು ಯಾವಾಗಲೂ ಹಿರಿಯರು ನೀಡಿದ ಆದೇಶವನ್ನು ತಪ್ಪದೆ ಪಾಲಿಸುತ್ತಿದ್ದರು. ಅವರ ಇಂತಹ ಗುಣಗಳು ಅವರನ್ನು ಆದರ್ಶವ್ಯಕ್ತಿ ಯನ್ನಾಗಿ ರೂಪಿಸಿದವು. ಅವರು ಮೌನ, ಪ್ರತಿಭಟನೆ, ಭಾರತದಲ್ಲಿ ಅಸಹಕಾರ ಅಭಿಯಾನ, ಸತ್ಯಾಗ್ರಹಕ್ಕೆ ಹೆಸರುವಾಸಿಯಾಗಿದ್ದರು. ಅನೇಕ ವರ್ಷಗಳ ಹೋರಾಟದ ಬಳಿಕ ಆಗಸ್ಟ್ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅವರು ನನ್ನ ಜೀವನದ ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಬಿ.ವಿನುಶ್ರೀ,
9 ನೇ ತರಗತಿ,
ಮಹಾರಾಣಿ ಬಾಲಕಿಯರ ಪ್ರೌಢಶಾಲೆ, ಮೈಸೂರು

ಹೋರಾಟದ ಅತ್ಯುತ್ತಮ ಮಾರ್ಗ ಅಹಿಂಸೆ ಎಂದು ತೋರಿಸಿಕೊಟ್ಟ ಗಾಂಧಿ
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹಾತ್ಮ ಗಾಂಧೀಜಿ ಬಹುವಾಗಿ ಶ್ರಮಿಸಿದರು. ಮಹಾತ್ಮ ಗಾಂಧೀಜಿ ಸಾರ್ವಜನಿಕ ವ್ಯಕ್ತಿಯಾಗಿದ್ದರು. ಭಾರತದ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರನ್ನು ಸುಧಾರಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರು. ಅವರು ಎಲ್ಲಾ ನೋವುಗಳನ್ನು ಅನುಭವಿಸಿದರು. ಆದರೆ, ಅವರ ನಂಬಿಕೆಗಳಲ್ಲಿ ಸ್ಥಿರವಾಗಿದ್ದರು. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಜನಸಾಮಾನ್ಯರು ಬಳಲುತ್ತಿರುವ ಮತ್ತು ಹಸಿವಿನಿಂದ ಬಳಲುತ್ತಿರುವ ಶೋಚನೀಯ ಅವ್ಯವಸ್ಥೆಯನ್ನು ಅವರು ಸಹಿಸಲಾಗಲಿಲ್ಲ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಎಚ್ಚರಿಕೆ ನೀಡಿದರು. ಯಾವುದೇ ಸಮಸ್ಯೆಗೆ ಆಯುಧಗಳು ಮಾತ್ರ ಉತ್ತರವಲ್ಲ ಎಂದು ಗಾಂಧೀಜಿ ಯಾವಾಗಲೂ ನಂಬಿದ್ದರು. ಒಂದೇ ಒಂದು ಆಯುಧವನ್ನೂ ಹಿಡಿದುಕೊಳ್ಳದೇ ನಾವು ಹೆಚ್ಚು ಶಕ್ತಿಶಾಲಿ ಶತ್ರುಗಳೊಂದಿಗೆ ಹೋರಾಡುವ ಅತ್ಯುತ್ತಮ ವಿಧಾನಗಳಲ್ಲಿ ಅಹಿಂಸೆಯೂ ಒಂದು. ಹಾಗಾಗಿ ಎಲ್ಲ ನೋವನ್ನೂ ಲೆಕ್ಕಿಸದೇ ಅವರು ಅಹಿಂಸೆಯ ಮೂಲಕ ತಮ್ಮ ದಾರಿಯನ್ನು ಮಾಡಿಕೊಂಡರು. ಅವರು ನಮ್ಮ ಸ್ವಾತಂತ್ರ್ಯದ ಇತಿಹಾಸದಲ್ಲಿ ಬಹಳ ಮುಖ್ಯವಾದ ಭಾಗವಾಗಿದ್ದಾರೆ.
ಮಾನ್ಯ ಎಲ್‌, 9 ನೇ ತರಗತಿ
ಜ್ಯೋತಿ ಪ್ರೌಢಶಾಲೆ,
ಮೈಸೂರು

ಇಂದಿನ ಸಮಾಜಕ್ಕೆ ಗಾಂಧಿಜಿ ಆದರ್ಶ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ದೊಡ್ಡ ಹೆಸರು ಮಹಾತ್ಮ ಗಾಂಽಜಿ ಅವರದು. ಸತ್ಯಾಗ್ರಹ, ಅಹಿಂಸೆಯ ಮೂಲಕ ಅವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ತಂದೆಯ ಉದಾತ್ತತೆ ಮತ್ತು ಧಾರ್ಮಿಕ ನಿಷ್ಠೆ, ತಾಯಿಯ ಸರಳತೆ ಮತ್ತು ಧಾರ್ಮಿಕ ಭಕ್ತಿ ಗಾಂಧೀಜಿ ಅವರ ಮೇಲೆ ಪ್ರಭಾವ ಬೀರಿತು. ಇದಲ್ಲದೇ, ಹರಿಶ್ಚಂದ್ರನ ಸತ್ಯಪ್ರಿಯತೆ, ಶ್ರವಣ ಕುಮಾರನ ಪಿತೃ ಪ್ರೇಮ ಅವರ ಮೇಲೆ ಪರಿಣಾಮ ಬೀರಿದವು. ೧೯೨೦ರಲ್ಲಿ ಅಸಹಕಾರ ಚಳವಳಿ, ೧೯೪೨ರಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ ನಡೆಸುವ ಮೂಲಕ ಆಂಗ್ಲರಿಗೆ ಸಿಂಹಸ್ವಪ್ನರಾದರು. ಗಾಂಧೀಜಿ ಅಹಿಂಸೆ, ಸತ್ಯ ಮತ್ತು ಶಾಂತಿಯ ತತ್ವಗಳನ್ನು ಅನುಸರಿಸಿದರು. ಅವರು ತಮ್ಮ ಅನುಯಾಯಿಗಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮಾರ್ಗದರ್ಶನ ನೀಡಿದರು. ಅವರು ಶಸಗಳನ್ನು ಬಳಸಿ ಅಲ್ಲ, ಅದರ ಬದಲು ಅಹಿಂಸೆ, ಸತ್ಯವನ್ನು ಬಳಸುವ ಮೂಲಕ ಸ್ವಾತಂತ್ರ್ಯ ಗಳಿಸಬಹುದು ಎಂದು ತಿಳಿಸಿದರು. ಅಂತಿಮವಾಗಿ ೧೯೪೭ರ ಆಗಸ್ಟ್ ೧೫ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಗಾಂಽಜಿ ಸಮಾಜದ ನಿಮ್ನ ವರ್ಗದವರನ್ನು ಮೇಲೆತ್ತಲು ಶ್ರಮಿಸಿದರು.

ಖುಷಿ ಎಸ್.ಎಂ

9ನೇ ತರಗತಿ

ತರಳುಬಾಳು ಪ್ರೌಢಶಾಲೆ

ಟಿ.ಕೆ.ಬಡಾವಣೆ

ಮೈಸೂರು

Tags:
error: Content is protected !!