Mysore
23
clear sky

Social Media

ಸೋಮವಾರ, 25 ಮೇ 2026
Light
Dark

SIR ಮೂಲಕ ರಾಜ್ಯದ 86 ಲಕ್ಷ ಮತದಾರರ ಹಕ್ಕಿಗೆ ಕನ್ನ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪ

ಮೈಸೂರು: SIR ಮೂಲಕ ರಾಜ್ಯದ 86 ಲಕ್ಷ ಮತದಾರರ ಹಕ್ಕಿಗೆ ಕನ್ನ ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ನಂತರ ಕರ್ನಾಟಕವೇ ಟಾರ್ಗೆಟ್. ರಾಜ್ಯದಲ್ಲಿ 15 ದಿನಗಳ ಹಿಂದೆ SIR ಪ್ರಕ್ರಿಯೆ ಮುಗಿಸಿದ್ದಾರೆ. ರಾಜ್ಯದಲ್ಲಿ 5.5 ಕೋಟಿ ಮತದಾರರ ಸಂಖ್ಯೆ ಇದೆ. SIR ಪ್ರಕಾರ 15% ಜನರನ್ನ ಮ್ಯಾಪಿಂಗ್ ಮಾಡಿಲ್ಲ. ಅಂದರೆ 80 ಲಕ್ಷ ಮತದಾರರನ್ನ ಹೊರಗಿಡುವ ಕೆಲಸ ಮಾಡಿದ್ದಾರೆ. ನನ್ನ ಹೆಸರು ಮ್ಯಾಪಿಂಗ್ ಆಗಲಿಲ್ಲ ಎಂದಾದರೆ ನನ್ನ ಮಕ್ಕಳ ಹೆಸರು ಸೇರ್ಪಡೆ ಆಗಲ್ಲ. ಇದು ಬಿಜೆಪಿ ಎಲೆಕ್ಷನ್ ಮಾಸ್ಟರ್ ಗಳ ಕೈವಾಡ. SIR ಮೂಲಕವೇ ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ, ಬಿಹಾರ, ಪ. ಬಂಗಾಳಗಳಲ್ಲಿ ಮತಗಳನ್ನು ಲೂಟಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 27,99,744 ಮಂದಿ ಮತದಾರರಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71,512 ಮತದಾರರನ್ನು ತೆಗೆದಿದ್ದಾರೆ. ನರಸಿಂಹರಾಜ ಕ್ಷೇತ್ರ 59,749 ಮತದಾರರನ್ನು ಕಿತ್ತು ಹಾಕಿದ್ದಾರೆ. ಈ ಮೂಲಕ 2028ರ ಚುನಾವಣೆಗೆ ಬಿಜೆಪಿ ತಯಾರು ಮಾಡಿಕೊಳ್ಳುತ್ತಿದ್ದಾರೆ. SIR ಅಸ್ತ್ರ ಬಳಸಿಕೊಂಡು 86 ಲಕ್ಷ ಮತದಾರರನ್ನು ರಾಜ್ಯದಲ್ಲಿ ಕಿತ್ತು ಹಾಕಿದ್ದಾರೆ. ಮೈಸೂರಿನ ಎನ್ ಆರ್ ನಲ್ಲಿ 43 ಸಾವಿರ ಮುಸ್ಲಿಂ ಮತದಾರರನ್ನು ಕಿತ್ತು ಹಾಕಿದ್ದಾರೆ. ಮುಂದೆ ತನ್ವಿರ್ ಸೇಠ್ ಹೇಗೆ ಚುನಾವಣೆ ಎದುರಿಸಬೇಕು? ಮತದ ಹಕ್ಕಿನಿಂದ ತೀರಸ್ಕೃತರಾದವರ ಬಳಿ ದಾಖಲೆ ಸಲ್ಲಿಸಲು ಹೇಳಿದ್ದಾರೆ. ತಾತ, ಮುತ್ತಾತನ ಮಾಹಿತಿಯ ದಾಖಲೆಗಳನ್ನು ಹೇಗೆ ಕೊಡಲು ಸಾಧ್ಯ? ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಹುತೇಕ 86 ಲಕ್ಷ ಮಂದಿ ಮತದಾರರು ಮತದಾನದಿಂದ ದೂರವಿಡುವ ಸಂಚು ಎಂದು ಗಂಭೀರ ಆರೋಪ ಮಾಡಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಚಿನ್ನ ಖರೀದಿಸಬೇಡಿ ಎಂದು ಹೇಳಿ ಹೋಗಿದ್ದಾರೆ. ವಿದೇಶಕ್ಕೆ ಹೋಗಬೇಡಿ ಎಂದಿದ್ದಾರೆ. ಪೆಟ್ರೋಲ್ ಡೀಸೆಲ್ ಮಿತವಾಗಿ ಬಳಸಿ ಎಂದಿದ್ದಾರೆ.
ಇದು ದೇಶದ ಒಬ್ಬ ಪ್ರಧಾನಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಕನಾಮಿಕಲ್ ಎಮರ್ಜೆನ್ಸಿ ಇದೆ ಎಂದು ಮೋದಿ ಹೇಳಿ ಹೋಗಿದ್ದಾರೆ. ಗ್ಯಾಸ್ ಬೆಲೆ ಏರಿಕೆ ಹಾಗೂ ಇತರೆ ವಿಷಯಗಳು ದೇಶದಲ್ಲಿ ಚರ್ಚೆಗೆ ಬರುತ್ತಿಲ್ಲ. ಸಿದ್ದರಾಮಯ್ಯ ಕೂತರು, ನಿಂತರು ದಿನಪೂರ್ತಿ ಡಿಬೇಟ್ ಮಾಡುತ್ತಾರೆ. ಚಿನ್ನ ಖರೀದಿ ಮಾಡಬೇಡಿ ಎಂದಿರುವ ಬಗ್ಗೆ ಜೆಡಿಎಸ್ ಎಂ ಎಲ್ ಸಿ ಶರವಣ ಯಾಕೆ ಸೈಲೆಂಟ್ ಆಗಿದ್ದಾರೆ ಮಾತನಾಡಬೇಕಲ್ವಾ? ಎಂದು ಪ್ರಶ್ನೆ ಮಾಡಿದರು.

 

Tags:
error: Content is protected !!