Mysore
34
few clouds

Social Media

ಬುಧವಾರ, 01 ಏಪ್ರಿಲ 2026
Light
Dark

ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ : ವೈರಮುಡಿ ಆಭರಣ ತಲೆಮೇಲೆ ಹೊತ್ತು ತಂದ ಡಿಸಿ, ಎಸ್‌ಪಿ

ಮೇಲುಕೋಟೆ : ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಕಿರೀಟಧಾರಣಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೆ ಪೂರ್ವಭಾವಿಯಾಗಿ, ಜಿಲ್ಲಾ ಖಜಾನೆಯಿಂದ ಭಾರೀ ಭದ್ರತೆಯೊಂದಿಗೆ ವೈರಮುಡಿ ಆಭರಣವನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಜಿಲ್ಲಾ ಖಜಾನೆಯಿಂದ ವೈರಮುಡಿಯನ್ನು ಹೊರೆ ತೆಗೆಯುವ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಹಾಜರಿದ್ದರು.

ಖಜಾನೆಯಿಂದ ಜಿಲ್ಲಾಧಿಕಾರಿ ಕುಮಾರ್ ಮತ್ತು ಪೊಲೀಸ್ ಅಧಿಕಾರಿ ಶೋಭಾರಾಣಿ, ತಲೆಯ ಮೇಲೆ, ವೈರಮುಡಿ ಆಭರಣಗಳ ಗಂಟನ್ನು ಹೊತ್ತು ತಂದು ಖಜಾನೆಯ ದ್ವಾರದಲ್ಲಿ ಇರಿಸಿದರು. ತೆಲೆಯ ಮೇಲೆ ವೈರಮುಡಿಯನ್ನು ಹೊತ್ತು ತರುವ ವೇಳೆ, ಕಿಕ್ಕಿರಿದು ಜನ ಸೇರಿದ್ದರು. ವೈರಮುಡಿಗೆ ಪೂಜೆಯನ್ನು ಸಲ್ಲಿಸಿದ ನಂತರ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಕೊಂಡೊಯ್ಯವ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ, ಜಿಲ್ಲಾ ಪಂಚಾಯತಿ ಸಿಇಒ ಕೆಆರ್ ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿಸಿ ಶಿವಾನಂದ ಮೂರ್ತಿ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಖಜಾನೆಯಿಂದ ಹೊರಡುವ ವೈರಮುಡಿ ಹೊತ್ತ ಮೆರವಣಿಗೆಗೆ ಮೊದಲು, ನಗರದ ಲಕ್ಷ್ಮೀ ಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ, ವಿವಿಧ ಗ್ರಾಮಗಳಲ್ಲಿ ಪೂಜೆ ನಡೆದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಮೇಲುಕೋಟೆಗೆ ತಲುಪಲಿದೆ. ಅಲ್ಲಿ ಮತ್ತೊಮ್ಮೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ, ಆಭರಣಗಳ ಮರು ಪರಿಶೀಲನೆ ನಡೆಸಿ, ನಂತರ ದೇವರಿಗೆ ತೊಡಿಸಲಾಗುವುದು.

ಇಂದು (ಮಾರ್ಚ್ 28) ರಾತ್ರಿ ಎಂಟು ಗಂಟೆಗೆ, ಸ್ವಾಮಿಗೆ ಕಿರೀಟಧಾರಣೆ ಮಾಡಿ, ವೈಭವದಿಂದ ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀ ದೇವಿಭೂದೇವಿ ಸಮೇತ ಗರುಡಾರೂಢನಾದ ಶ್ರೀ ಚೆಲುವನಾರಾಯಣ ಸ್ವಾಮಿಯ ಉತ್ಸವ ಮೂರ್ತಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ಮಾಡಿ ಉತ್ಸವ ನಡೆಸಲಾಗುತ್ತದೆ. ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ಮಾ.23ರಿಂದಲೇ ಚಾಲನೆ ದೊರೆತಿದೆ ಮತ್ತು ಏಪ್ರಿಲ್ 4ರಂದು ಮುಕ್ತಾಯವಾಗಲಿದೆ.

ಮಾ.28ರಂದು ರಾತ್ರಿ 8.30ಕ್ಕೆ ಗರುಡ ಪ್ರದಕ್ಷಿಣೆ, ಮಹಾಮಂಗಳಾರತಿ ಬಳಿಕ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನಸುಕಿನ ಜಾವ 3.30ರವರೆಗೆ ಉತ್ಸವ ನಡೆದು, ವಾಹನೊತ್ಸವ ಮಂಟಪದಲ್ಲಿ ಮುಕ್ತಾಯಗೊಳ್ಳಲಿದೆ.

Tags:
error: Content is protected !!