Mysore
21
overcast clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಧುರಂಧರ್-‌2 ನಿರಾಶೆ ಮೂಡಿಸಿದೆ : ರಮ್ಯಾ ಪೋಸ್ಟ್‌

ಬೆಂಗಳೂರು : ಭರ್ಜರಿ ಪ್ರದರ್ಶನ ಕಾಣುತ್ತಿರು ಧುರಂಧರ್‌ 2 ಸಿನಿಮಾ ನಿರಾಸೆ ಮೂಡಿಸಿದ್ದು, ಚಿತ್ರಮಂದಿರಕ್ಕೆ ಹೋಗಿ ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ನಟಿ ರಮ್ಯಾ ಸಲಹೆ ನೀಡಿದ್ದಾರೆ.

ಮಾರ್ಚ್ 19ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನವೇ ಶತಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗುತ್ತಿದ್ದರೂ, ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ “ಭಾರಿ ನಿರಾಶೆ” ಎಂದು ಕರೆದಿದ್ದಾರೆ.

ಚಿತ್ರವು ಎಂದಿಗೂ ಮುಗಿಯದ ಅಧ್ಯಾಯನಗಳನ್ನು ಹೊಂದಿರುವ ಅತ್ಯಂತ ನೀರಸ ವಿಷಯದ ಪಠ್ಯಪುಸ್ತಕ ಓದುವಂತಿದೆ. ಧುರಂಧರ್‌ ಭಾಗ ಒಂದರಲ್ಲಿ ಜನರು ಕೂಗೂತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು, ಕಂಪಿಸುವ ಶಕ್ತಿ ಇತ್ತು, ತೊಡಗಿಸಿಕೊಳ್ಳುವಿಕೆ ಇತ್ತು. ಆದರೆ ಇಲ್ಲಿ ಅದಿಲ್ಲ. ಚಿತ್ರಮಂದಿರದಲ್ಲಿ ಸಾಮೂಹಿಕ ನಿರಾಶೆಯನ್ನು ನೀವು ಅನುಭವಿಸಬಹುದು ಎಂದು ಪೋಸ್ಟ್‌ ಮಾಡಿದ್ದಾರೆ.

ಆದಿತ್ಯ ಧರ್‌ ಆಕ್ಷನ್‌ ಕಟ್‌, ರಣವೀರ್‌ ಸಿಂಗ್‌ ನಟನೆಯ ʻದುರಂಧರ್‌ 2’ ಸಿನಿಮಾ ವಿಶ್ವದಾದ್ಯಂತ ಸೌಂಡ್‌ ಮಾಡುತ್ತಿದೆ. ಮೊದಲನೇ ದಿನವೇ ವಿಶ್ವಾದ್ಯಂತ ಸಿನಿಮಾ 240 ಕೋಟಿ ರೂಪಾಯಿ ಗಳಿಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ ಮೊದಲ ದಿನದ ಪೇಯ್ಡ್‌ ಪ್ರಿವ್ಯೂಗಳಲ್ಲೇ ಸುಮಾರು 50 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಬೇರೆ ಭಾಷೆಗಳಿಗೆ ಡಬ್‌ ಆಗಿದ್ದರೂ ಕೂಡ, ʻದುರಂಧರ್‌ 2’ ಸಿನಿಮಾವನ್ನ ಹೆಚ್ಚಿನ ಪ್ರೇಕ್ಷಕರು ಮೂಲ ಹಿಂದಿ ಆವೃತ್ತಿಯಲ್ಲೇ ನೋಡಲು ಒಲವು ತೋರುತ್ತಿದ್ದಾರೆ.

 

Tags:
error: Content is protected !!