Mysore
26
overcast clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಅಜಯ್ ಮಾರ್ಕನ್ ಭೇಟಿ

ಮಡಿಕೇರಿ: ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸಂಸದ ಅಜಯ್ ಮಾರ್ಕನ್ ಹಾಗೂ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.

ಶಾಸಕರ ಆಹ್ವಾನದ ಮೇರೆಗೆ, ಕೊಡಗು ಪ್ರವಾಸದಲ್ಲಿರುವ ಅಜಯ್ ಮಾಕನ್ ಸಾಕಾನೆ ಶಿಬಿರಕ್ಕೆ ಶಾಸಕರೊಂದಿಗೆ ವೀಕ್ಷಣೆಗೆ ತೆರಳಿದರು. ಸಾಕನೆ ಶಿಬಿರದಲ್ಲಿ ಇರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಶಾಸಕರು, ಸಂಸದರು, ಶಿಬಿರದ ಅಽಕಾರಿಗಳು ಹಾಗೂ ಪರಿಚಾರಕರೊಂದಿಗೆ ಮಾತನಾಡಿದರು. ಸಾಕಾನೆ ಶಿಬಿರದಲ್ಲಿ ಸದ್ಯಕ್ಕೆ ಇರುವ ಆನೆಗಳ ಸಂಖ್ಯೆಯ ಬಗ್ಗೆ ವಿವರ ಪಡೆದು ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಿತಿಮತಿ ವಲಯ ಅಧ್ಯಕ್ಷ ನವೀನ್, ಕಾಂಗ್ರೆಸ್ ಪ್ರಮುಖರಾದ ಬೆನ್ನಿ, ಪಂಕಜ, ಹರೀಶ್ ಪೂವಯ್ಯ ಇತರರು ಉಪಸ್ಥಿತರಿದ್ದರು.

Tags:
error: Content is protected !!