Mysore
21
few clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಕೊಟ್ಟಿಗೆಗೆ ನುಗ್ಗಿ ಹಸು ಕೊಂದ ಹುಲಿ

ಮಡಿಕೇರಿ : ಪೊನ್ನಂಪೇಟೆ ಸಮೀಪದ ಚೀಪೆ ಕೊಲ್ಲಿಯಲ್ಲಿ ಗ್ರಾಮದ ನಟೇಶ್ ಅವರ ತೋಟದ ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸುವನ್ನು ಭಾನುವಾರ ರಾತ್ರಿ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ಹಸುವನ್ನು ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿ ಹೋಗಿದೆ. ಇಂದು ಸಹ ಬೆಳಿಗ್ಗೆ ಪೊನ್ನಂಪೇಟೆ ಬಾಳೆಲೆ ಮುಖ್ಯರಸ್ತೆ ಬದಿಯ ತೋಟದಲ್ಲಿ ಹುಲಿ ಕಾಣಿಸಿಕೊಂಡಿದೆ. ಈ ಹಿನ್ನಲೆ ಗ್ರಾಮಸ್ಥರಲ್ಲಿ ಭಯಭೀತಿ ಉಂಟಾಗಿದೆ.

ಪತ್ತೆಗೆ ಆಗ್ರಹ; – ಹುಲಿ ದಾಳಿಯಿಂದ ಆಗಾಗ್ಗೆ ಇಂತಹ ಘಟನೆ ನಡೆಯುತ್ತಿವೆ. ಜಾನುವಾರು ಹಾಗೂ ಸಾರ್ವಜನಿಕ ಭಯಭೀತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಹುಲಿ ಪತ್ತೆಗೆ ವಿಶೇಷ ಕಾರ್ಯ ನಿಗಾವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ :- ಪೊನ್ನಂಪೇಟೆ ಅರಣ್ಯ ಅಧಿಕಾರಿಗಳು ಚೀಪೆ ಕೊಲ್ಲಿಗೆ ಭೇಟಿ ನೀಡಿ ಸಿಸಿಟಿವಿ ಅಳವಡಿಸಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

Tags:
error: Content is protected !!