Mysore
24
broken clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಓದುಗರ ಪತ್ರ | ವಿಐಪಿಗಳಿಗೆ ದರ್ಶನ ಸಮಯ ಬದಲಾವಣೆ ಸರಿಯೇ ?

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ(ಟಿಟಿಡಿ) ಸಾಮಾನ್ಯ ಜನರಿಗೆ ದರ್ಶನ ದೊರೆಯುವಂತೆ ಮಾಡುವ ಉದ್ದೇಶದಿಂದ ಗಣ್ಯವ್ಯಕ್ತಿಗಳಿಗೆ ದರ್ಶನದ ಸಮಯದವನ್ನು ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಟ್ರಸ್ಟ್‌ ಸದಸ್ಯರೊಬ್ಬರು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾಮಾನ್ಯ ಜನರಿಗೆ ಬೇರೆ ದರ್ಶನ, ವಿಐಪಿಗಳಿಗೆ ಬೇರೆ ದರ್ಶನ ವ್ಯವಸ್ಥೆ ಎಂಬುದು ಎಷ್ಟು ಸರಿ? ವಿಐಪಿಗಳು ಎಂದರೆ ಯಾರು? ಅಧಿಕಾರಿ, ಹಣವಿದ್ದವರು, ರಾಜಕೀಯ ನಾಯಕರು ವಿಐಪಿಗಲಾದರೆ, ಇವರಿಗೆ ಅಧಿಕಾರ ಕೊಟ್ಟವರು ಮತದಾರರಲ್ಲವೇ, ಕೂಲಿ ಕಾರ್ಮಿಕರು ಹಣ ಸಂಪಾದನೆಗೆ ನೆರವಾದರೂ, ಮತದಾರರು ಮತ್ತು ಕೂಲಿ ಕಾರ್ಮಿಕರು ವಿಐಪಿಗಳಾಗದೆ ಉಳಿದರು.

ಸಿದ್ದಲಿಂಗೇಗೌಡ, ಹೈರಿಗೆ, ಎಚ್‌.ಡಿ ಕೋಟೆ ತಾ.

Tags:
error: Content is protected !!