Mysore
23
overcast clouds

Social Media

ಶನಿವಾರ, 23 ಮೇ 2026
Light
Dark

ಚನ್ನಪಟ್ಟಣ ಉಪ ಚುನಾವಣೆ: ಜೆಡಿಎಸ್‌ ಅವರು ಇಷ್ಟು ವೀಕ್‌ ಆಗ್ತಾರೆ ಅಂತ ಊಹಿಸಿರಲಿಲ್ಲ: ಡಿಕೆಶಿ

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ಕ್ಷೇತ್ರದಲ್ಲಿ ಜೆಡಿಎಸ್‌ ನಾಯಕರು ಸ್ಪರ್ಧಿಸುತ್ತಿಲ್ಲ, ಅವರು ಕ್ಷೇತ್ರವನ್ನು ಬಿಟ್ಟುಕೊಡುವಷ್ಟು ವೀಕ್‌ ಆಗ್ತಾರೆ ಅಂತ ನಾನು ಊಹಿಸಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜೆಡಿಎಸ್‌ ಪಕ್ಷದ ಕಾಲೆಳೆದಿದ್ದಾರೆ.

ನಗರದ ಖಾಸಗಿ ಕಾಲೇಜ್‌ವೊಂದರಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರೊಡನೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸುತ್ತಿಲ್ಲ ಎಂಬ ವಿಷಯವನ್ನು ನಿನ್ನೆ ರಾತ್ರಿ ಯಾರೋ ಒಬ್ಬರು ಫೋನ್‌ ಕಾಲ್‌ ಮುಖಾಂತರ ನನಗೆ ತಿಳಿಸಿದರು. ಆದರೆ, ನಾನು ಜೆಡಿಎಸ್‌ ಅವರು ಇಷ್ಟೊಂದು ವೀಕ್‌ ಆಗುತ್ತಾರೆ ಎಂದು ಊಹೆ ಮಾಡಿರಲಿಲ್ಲ, ನಮ್ಮೊಂದಿಗೆ ಫೈಟ್‌ ಮಾಡುತ್ತಾರೆ ಎಂದುಕೊಂಡಿದ್ದೆ, ಆದರೆ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

 

Tags:
error: Content is protected !!