Mysore
24
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ರೇಣುಕಾಸ್ವಾಮಿ ಕೊಲೆ ಕೇಸ್:‌ ನಟ ದರ್ಶನ್‌ ಬಚಾವಾಗಲು 30 ಲಕ್ಷ ರೂ ಡೀಲ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಟೋಟಕ ತಿರುವು ಸಿಕ್ಕಿದೆ. ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಬಚವಾಗಲು ಬರೋಬ್ಬರಿ 30 ಲಕ್ಷ ರೂ ಹಣ ನೀಡಿದ್ದರು ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಹತ್ಯೆ ಕೇಸಿನ ವಿಚಾರಣೆ ವೇಳೆ ಪೊಲೀಸ್‌ ತನಿಖೆಯಲ್ಲಿ ಈ ಸ್ಪೋಟಕ ಮಾಹಿತಿ ಸಿಕ್ಕಿದೆ. ಕೊಲೆಯಾದ ನಂತರ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ ೩೦ ಲಕ್ಷ ರೂಪಾಯಿ ಹಣವನ್ನು ದರ್ಶನ್‌ ನೀಡಿದ್ದರು. ಈ ದೊಡ್ಡ ಮೊತ್ತದ ಹಣವನ್ನು ಪ್ರದೋಶ್‌ ಎನ್ನುವವನಿಗೆ ಕೊಟ್ಟು, ಕೆಲವು ಹುಡುಗರನ್ನು ಪೋಲಿಸರಿಗೆ ಸರೆಂಡರ್‌ ಆಗಲು ಹೇಳಿದ್ದರು. ಆ ಮೂಲಕ ಕೊಲೆ ಕೇಸ್‌ನಿಂದ ನಟ ದರ್ಶನ್‌ ಹಾಗೂ ನಟಿ ಪವಿತ್ರಾಗೌಡ ಸೇರಿದಂತೆ ದೊಡ್ಡವರು ಬಚಾವಾಗಲು ಯೋಜನೆ ರೂಪಿಸಿದ್ದರು. ಅದರಂತೆ ಪ್ರದೋಶ್‌ ಎನ್ನುವ ವ್ಯಕ್ತಿ ಹಣವನ್ನು ಪಡೆದುಕೊಂಡು ಹೋಗಿದ್ದರು.

ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿದ್ದ ಶವವನ್ನು ತೋರಿಸಿ ಬಾಡಿಯನ್ನು ಎಸೆದು ಸರೆಂಡರ್‌ ಆಗುವಂತೆ ಕಾರ್ತಿಕ್‌ ಹಾಗೂ ಅವನ ಸಹಚರರಿಗೆ ಸೂಚಿಸಲಾಗಿತ್ತು. ಜೊತೆಗೆ ನೀವು ಅರೆಸ್ಟ್‌ ಆಗಿ, ಕೋರ್ಟ್‌ ಖರ್ಜು, ನಿಮಗೆ ಜಾಮೀನು ನೀಡಿ ಹೊರೆಗೆ ಕರೆಸಿಕೊಳ್ಳಲುವ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಲಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈ ಹಣವನ್ನು ದರ್ಶನ್‌ ಅವರೇ ನೀಡಿದ್ದು, ಕೇಸ್‌ನಲ್ಲಿ ದರ್ಶನ್‌ ವಿರುದ್ಧ ಸಿಕ್ಕ ದೊಡ್ಡ ಎವಿಡೆನ್ಸ್‌ ಆಗಿದೆ. ಕೊಲೆ ಬಳಿಕ ರಾಘವೇಂದ್ರ, ನಿಖಿಲ್‌, ಕೇಶವಮೂರ್ತಿ ಹಾಗೂ ಕಾರ್ತಿಕ್‌ ಮೊದಲು ಸರೆಂಡರ್‌ ಆಗಿದ್ದರು.

Tags:
error: Content is protected !!