Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಆರ್‌.ಅಶೋಕ್‌ ತಮ್ಮ ಕುರ್ಚಿ ನೋಡಿಕೊಳ್ಳಿ: ಸಚಿವ ದಿನೇಶ್‌ ಗುಂಡುರಾವ್‌

ಬೆಂಗಳೂರು: ಮೊದಲು ತಮ್ಮ ಕುರ್ಚಿ ಸರಿಯಾಗಿ ನೋಡಿಕೊಳ್ಳಿ ಎಂದು ಹೇಳುವ ಮೂಲಕ ಆರ್‌. ಅಶೋಕ್‌ರವರ ಸಿಎಂ ಕುರ್ಚಿ ಬದಲಾವಣೆ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ. ‌

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಬೇರೆಯವರ ಕುರ್ಚಿಯ ಬಗ್ಗೆ ಮಾತನಾಡುವ ಮೊದಲು ತಮ್ಮ ಪಕ್ಷದಲ್ಲಿ ಸುದ್ದಿಯಾಗುತ್ತಿರುವ ರಾಜ್ಯಾಧ್ಯಾಕ್ಷ ಕುರ್ಚಿ ಸ್ಥಾನದ ಬಗ್ಗೆ ಗಮನ ನೀಡಿದರೆ ಒಳ್ಳೆಯದು. ಮುಂದೆ ಅವರೇ ವಿರೋಧ ಪಕ್ಷದ ನಾಯಕರಾಗಿ ಇರುತ್ತಾರೋ? ಅಥವಾ ಇರಲ್ವೋ? ಸುಮ್ಮನೆ ಯಾಕೆ ಭವಿಷ್ಯವಾಣಿ ನುಡಿಯುತ್ತಾರೆ. ಅಶೋಕ್‌ ಅವರೇ ಜನರ ಮುಂದೆ ನಗೆಪಾಟಲೀಗೀಡಾಗಬೇಡಿ ಎಂದು ವ್ಯಂಗ್ಯವಾಡಿದರು.

ಸಿಎಂ ಬದಲಾವಣೆ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಸಿಎಂ ಬದಲಾವಣೆ ಬಗ್ಗೆ ಯಾರು ಮಾತನಾಡಬಾರದು. ಈ ಬಗ್ಗೆ ಚರ್ಚೆ ಮಾಡದಂತೆ ಹೈಕಮಾಂಡ್‌ ಹೇಳಿದೆ. ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

 

Tags: