Mysore
20
overcast clouds
Light
Dark

ಕುತಂತ್ರ ರಾಜಕಾರಣದಿಂದ ನಿಖಿಲ್‌ ಸೋತಿದ್ದು – ಆ ಸೋಲನ್ನು ಒಪ್ಪಲು ಸಿದ್ದನಿಲ್ಲ : ಹೆಚ್‌.ಡಿ. ಕುಮಾರಸ್ವಾಮಿ

ಮಂಡ್ಯ : ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿಯ ಸೋಲನ್ನು ನಾನು ಒಪ್ಪಲು ಸಿದ್ದನಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿಯ ಸೋಲನ್ನು ನಾನು ಒಪ್ಪಲು ಸಿದ್ದನಿಲ್ಲ ಎಂದರು.

ಅಂದಿನ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ  ಕುತಂತ್ರ ರಾಜಕಾರಣದಿಂದ ಸೋತಿದ್ದೇ ಹೊರತು ಜಿಲ್ಲೆಯ ಜನತೆಯಿಂದ ಅಲ್ಲ ಎಂದು ಅಭಿಪ್ರಾಯ ಹೊರಹಾಕಿದರು.