ಬೆಂಗಳೂರು: ದಿನನಿತ್ಯ ಬೆಲೆ ಏರಿಕೆ ಎಂಬ ಇಂಜೆಕ್ಷನ್ ಚುಚ್ಚುವ ಬದಲು. ಒಮ್ಮೆಲೆ ಬೆಲೆ ಏರಿಕೆಯ ಇಂಜೆಕ್ಷನ್ ಕೊಟ್ಟು ಬಿಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಲ್ಲದಕ್ಕೂ ಬೆಲೆ ಏರಿಕೆ ಮಾಡುತ್ತಿದೆ. ಸಿದ್ರಾಮಣ್ಣ ಯಾವುದಕ್ಕೆಲ್ಲಾ ಬೆಲೆ ಜಾಸ್ತಿ ಮಾಡಬೇಕು ಅಂದುಕೊಂಡಿದ್ದೀರಾ ಎಲ್ಲವನ್ನು ಒಟ್ಟಿಗೆ ಮಾಡಿ ಬಿಡಿ ಎಂದು ಮನವಿ ಮೂಲಕ ವ್ಯಂಗ್ಯವಾಡಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆಗೆ ಬಗ್ಗೆ ಸರ್ಕಾರ ಹುನ್ನಾರ ನಡೆಸುತ್ತಿದೆ. ಮೆಟ್ರೋ ಟಿಕೆಟ್ ದರ ಏರಿಸುವ ಮೂಲಕ ರಾಜ್ಯದ ಜನತೆಯ ಹಣವನ್ನು ಲೂಟಿ ಮಾಡಲು ಸರ್ಕಾರ ಚಿಂತಿಸುತ್ತಿದೆ. ಸಿದ್ರಾಮಣ್ಣ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಾನು ಪ್ರೀತಿಯಿಂದ ಕೇಳುತ್ತೇನೆ ಬೆಲೆ ಏರಿಕೆ ಮಾಡಿ ಜನತೆಯನ್ನು ಸಾಯಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ಜನರ ಶಾಪ ರಾಜ್ಯ ಸರ್ಕಾರ ಮೇಲೆ ಜಾಸ್ತಿ ಆಗಿದೆ. ಹಾಲು, ವಿದ್ಯುತ್, ಸ್ಟಾಂಪ್ ಡ್ಯೂಟಿ, ಮೆಟ್ರೋ ದರ ಏರಿಕೆ ಈಗೆ ಎಲ್ಲ ಬೆಲೆ ಏರಿಕೆ ಆಗುತ್ತಿದೆ. ರಾಜ್ಯದ ಜನತೆಗೆ ಕಾಂಗ್ರೆಸ್ ತೆರಿಗೆಗಳ ಹೊರೆ ಹೊರಿಸುತ್ತಿದೆ. ಬೆಲೆ ಏರಿಕೆಯನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಯನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.