Mysore
23
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಕೈ ಮುಗಿದು ಬೇಡುತ್ತೇನೆ ಮೇಕೆದಾಟಿಗೆ ಅವಕಾಶ ಮಾಡಿಕೊಡಿ : ಡಿಕೆಶಿ ಮನವಿ

ಬೆಂಗಳೂರು : ಮೇಕೆದಾಟಿಗೆ ಅವಕಾಶ ಮಾಡಿಕೊಡಿ. ಅಲ್ಲಿ ನೀರು ತುಂಬಿದರೆ ನಿಮಗೆ ಸೇರುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸಹಮತ ನೀಡಿ. ಅಲ್ಲಿ ನೀರು ತುಂಬಿದರೆ ನಿಮಗೇ ತಾನೆ ಸೇರುತ್ತದೆ. ಯೋಜನೆ ಅನುಷ್ಠನಕ್ಕೆ ಅವಕಾಶ ಮಾಡಿಕೊಡಿ ಎಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು.

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ.ಆದರೆ ನ್ಯಾಯಾಲಯದ ಆದೇಶಕ್ಕೆ ಪ್ರತಿಯಾಗಿ ನಾವು ಮೇಲ್ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದರು.

ನೆನ್ನೆಯಿಂದ ಉತ್ತಮ ಮಳೆಯಅಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ಬರುತ್ತಿರುವ ನೀರನ್ನು ಬೆಳಗೊಂಡಕ್ಕೆ ಬಿಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಮಳೆಯೇ ನಮಗೆಲ್ಲಾ ಆಧಾರವಾದ ಕಾರಣ, ಮಳೆಯಿಂದಲೇ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಗೆ ಅವಕಾಶ ಮಾಡಿಕೊಡಿ. ಅಲ್ಲಿ ಶೇಕರಣೆಯಾದ ಎಲ್ಲಾ ನೀರು ನಿಮಗೆ ಬರುತ್ತದೆ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಸಹಮತ ನೀಡಿ ಎಂದು ಎಲ್ಲರಲ್ಲೂ ಮನವಿ ಮಾಡಿದರು.

Tags:
error: Content is protected !!