Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧಾರ : ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ

ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹೆಸರಿನಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧರಿಸಿದ್ದು, ಈ ತೀರ್ಮಾನವನ್ನು ಪರಿಸರ ಪ್ರೇಮಿಗಳು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಹಾಗೂ ವೈಲ್ಡ್ ಕ್ಯಾಟ್-ಸಿ., ಮುಖ್ಯಸ್ಥ ಹಾಗೂ ಮಾಜಿ ಗೌರವ ವನ್ಯಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಹೆಲಿಟೂರಿಸಂಗೆ ತೀವ್ರ ವಿರೋಧ ವ್ಯಕ್ತಪಡಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ೨೦೨೪ರಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ಸಂಭವವಿದ್ದಾಗ ತಾವು ವಿರೋಽಸಿರುವುದನ್ನು ನೆನಪಿಸಿದ್ದಾರೆ.

ಇದನ್ನು ಓದಿ: ಇತಿಹಾಸ ತಿರುಚಲು ಮೋದಿ ಯತ್ನ : ಗೌರವ್‌ ಗೊಗೊಯ್‌ ಆರೋಪ

ಮಾಹಿತಿ ಪ್ರಕಾರ ಡಿಸೆಂಬರ್ ೧೩ ರಿಂದ ೧೯ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ ಗಿರಿಭಾಗದ ವೀಕ್ಷಣೆ, ಡಿಸೆಂಬರ್ ೨೦ ರಿಂದ ೨೨ ರವರೆಗೆ ಮೂಡಿಗೆರೆ, ಡಿ.೨೩ ರಂದು ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ, ಡಿ.೨೪ ಮತ್ತು ೨೫ ರಂದು ಕಳಸ ಹಾಗೂ ಡಿ.೨೬ ರಿಂದ ಜನವರಿ ೬ರವರೆಗೆ ಮತ್ತೆ ಗಿರಿಭಾಗ – ಹೀಗೆ ಹೆಲಿಟೂರಿಸಂಗೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಎಲ್ಲ ಸ್ಥಳಗಳು ಪರಿಸರ ಸೂಕ್ಷ ವಾಗಿದ್ದು, ಇಲ್ಲಿ ಈ ರೀತಿ ‘ಜಾಯ್‌ರೈಡ್ ಮಾಡುವುದರಿಂದ ಜನರಿಗೇನೋ ಮನರಂಜನೆ ಸಿಗಬಹುದು; ಕೆಲವು ಖಾಸಗಿ ಕಂಪನಿಗಳಿಗೆ ಲಾಭವಾಗಬಹುದು. ಆದರೆ ಈ ಅವೈಜ್ಞಾನಿಕ ಕ್ರಮದಿಂದ ವನ್ಯಪ್ರಾಣಿಗಳ ಸ್ವೇಚ್ಛೆಗೆ ಸಂಚಕಾರವಾಗದೇ. ಈಗಾಗಲೇ ವನ್ಯಜೀವಿ-ಮಾನವ ಸಂಘರ್ಷದಿಂದ ಸಾಕಷ್ಟು ತತ್ತರಿಸಿದ್ದೇವೆ. ಇಷ್ಟಾಗಿಯೂ ಬುದ್ಧಿ ಕಲಿಯದಿದ್ದರೆ ಇದಕ್ಕೇನನ್ನಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಭರದಲ್ಲಿ ಮುಳ್ಳಯ್ಯನಗಿರಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಿರಿಶ್ರೇಣಿಗಳ ಸೂಕ್ಷ ತೆ ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲೇ ಅತೀ ಎತ್ತರದ ಮುಳ್ಳಯ್ಯನಗಿರಿ ಪಶ್ಚಿಮಘಟ್ಟದ ವಿಶೇಷತೆಯಾದ ಶೋಲಾ ಕಾಡುಗಳನ್ನು ತನ್ನ ಇಳಿಜಾರಿನಲ್ಲಿ ಹೊಂದಿದ್ದು, ಕಾಡುಗಳ ಪಕ್ಕದಲ್ಲೇ ಅತ್ಯಂತ ಎತ್ತರದ ಹುಲ್ಲು ಬೆಳೆಯುವ ಪ್ರದೇಶವೂ ಆಗಿದೆ. ಬಹು ಮುಖ್ಯವಾಗಿ ಹೊನ್ನಮ್ಮನಹಳ್ಳ, ಹೆಬ್ಬೇಹಳ್ಳ, ತಡಬೇಹಳ್ಳ, ವಾಟೇಹಳ್ಳ ನೀರಿನ ಮೂಲವೂ ಆಗಿದ್ದು, ಈ ಹಳ್ಳಗಳ ನೀರು ಭದ್ರಾ ನದಿಯ ಉಪನದಿಯಾದ ಸೋಮವಾಹಿನಿಯನ್ನು ಸೇರುತ್ತ್ತಿದೆ. ಇಲ್ಲಿ ವೇದಾ ನದಿ ಹುಟ್ಟುತ್ತದಲ್ಲದೆ, ಮದಗದಕೆರೆ ಮತ್ತು ಅಯ್ಯನಕೆರೆಗೂ ನೀರುಣಿಸುವ ಜಲಮೂಲ ಹೊಂದಿದೆ. ಹಾಗೆಯೇ ಮುಳ್ಳಯ್ಯನಗಿರಿ ಅದರ ತಗ್ಗಿನ ಅನೇಕ ಗ್ರಾಮಗಳಿಗೆ ನೀರುಣಿಸುತ್ತದೆ ಎಂದಿದ್ದಾರೆ.

ಮೂಡಿಗೆರೆ ಹಾಗೂ ಸುಂಕಸಾಲೆ ಭಾಗದಲ್ಲಿ ಮೀಸಲು ಅರಣ್ಯ ಪ್ರದೇಶಗಳಿದ್ದು, ಅಲ್ಲೂ ಕೂಡ ಹೆಲಿಟೂರಿಸಂನಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗಲಿದೆ. ಜಿಲ್ಲಾಡಳಿತ ಹೆಲಿ ಟೂರಿಸಂ ಕೈಬಿಟ್ಟು ಜಿಲ್ಲೆಯ ಸೂಕ್ಷ ಪ್ರದೇಶಗಳ ಪ್ರಾಮುಖ್ಯತೆ ಅರಿತು ರಕ್ಷಿಸಲು ಮುಂದಾಗಬೇಕು. ಇಲ್ಲಿ ಹುಟ್ಟಿ ಹರಿಯುವ ಜಲಮೂಲಗಳ ಮಾಲಿನ್ಯ ತಡೆಯಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

Tags:
error: Content is protected !!