Mysore
28
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

dk shivkumar (2)

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಧರ್ಮಸ್ಥಳ ಪ್ರಕರಣ ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಈಗ ಬುರುಡೆ ಗ್ಯಾಂಗ್‌ ಷಡ್ಯಂತ್ರದ ಕುರಿತು ಹೇಳಿಕೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ. ರಾಜಕೀಯ ಯಾರೂ ಏನ್‌ ಬೇಕಾದರೂ ಮಾಡಬಹುದು. ನಾನು ಮಾತನಾಡಿದ್ರೆ ಸರ್ಕಾರದ ಹೇಳಿಕೆ ಆಗುತ್ತದೆ. ಅಂತಿಮ ವರದಿ ಬರಲಿ. ಆಮೇಲೆ ಎಲ್ಲವನ್ನೂ ಮಾತನಾಡುತ್ತೇನೆ. ಸಿಎಂ ಅಧಿಕೃತ ಸ್ಟೇಟ್‌ಮೆಂಟ್‌ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಅವರು, ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು. ನಮಗೆ ಆ ಮಾಹಿತಿ ಇದೆ. ಸುಪ್ರೀಂಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್‌ ಹಾಕಿದ್ದೂ ಗೊತ್ತು. ಅಲ್ಲಿ ರಿಜೆಕ್ಟ್‌ ಆಗಿದ್ದು ಗೊತ್ತು. ಆದರೆ ಪೊಲೀಸ್‌ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆ. ವರದು ಕೊಡುತ್ತಾರೆ ಎಂದು ತಿಳಿಸಿದರು.

Tags:
error: Content is protected !!