Mysore
24
moderate rain

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಯತ್ನಾಳ್ ಉಚ್ಚಾಟಿಸಿ ತಪ್ಪು ಮಾಡಿದ ಬಿಜೆಪಿ: ಶಿವರಾಜ್‌ ತಂಗಡಗಿ

ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಬಿಜೆಪಿ ತಪ್ಪು ಮಾಡಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್‌ ಬಿಜೆಪಿಯ ಪ್ರಬಲ ನಾಯಕ. ಬಿಜೆಪಿಯ ಪಕ್ಷದೊಳಗಿನ ಭ್ರಷ್ಟಚಾರವನ್ನು ಹೊರ ತಂದಿದ್ದಕ್ಕೆ ಅವರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಹನಿಟ್ರ್ಯಾಪ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಒಳ್ಳೆಯ ಬೆಳವಣಿಗೆಯಲ್ಲ. ತಪ್ಪು ಮಾಡಿದವರ ವಿರುದ್ಧ ದೂರು ನೀಡಲಿ ತನಿಖೆ ಮಾಡುತ್ತಾರೆ. ಈ ಬಗ್ಗೆ ಸಚಿವ ಕೆಎನ್‌ ರಾಜಣ್ಣ ಅವರೇ ಕೇಳಬೇಕು ಅಂದರು.

Tags:
error: Content is protected !!