Mysore
23
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ರಾಜ್ಯ ಸರ್ಕಾರ, ಸದನದಲ್ಲಿ ವಿಪಕ್ಷದ ಕಣ್ತಪ್ಪಿಸಿ ಮುಸ್ಲಿಮ್‌ ಮೀಸಲಾತಿ ಬಿಲ್‌ ಮಂಡಿಸಿದೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ ಸದನದಲ್ಲಿ ವಿಪಕ್ಷದ ಕಣ್ತಪ್ಪಿಸಿ ಮುಸಲ್ಮಾನರ ಮೀಸಲಾತಿ ಬಿಲ್‌ ಮಂಡನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.19) ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನಿನ್ನೆ ಕದ್ದುಮುಚ್ಚಿ ವಿರೋಧ ಪಕ್ಷಗಳ ಕಣ್ತಪ್ಪಿಸಿ ಮೀಸಲಾತಿ ಬಿಲ್‌ ಮಂಡನೆ ಮಾಡಿದ್ದಾರೆ. ಹಾಗಾಗಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದ್ದು, ರಾಜ್ಯ ಸರ್ಕಾರದ ತುಘಲಕ್‌ ದರ್ಬಾರ್‌ ವಿರೋಧಿಸುತ್ತೇವೆ. ಅಲ್ಲದೇ ಇದರ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್‌ ಯತ್ನಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರು ಹನಿಟ್ರ್ಯಾಪ್‌ ಮಾಡೋಕೆ ಹೋಗಿದ್ದಾರೋ ಅವರನ್ನೇ ಕೇಳಿ ಎಂದು ತಿಳಿಸಿದರು.

Tags:
error: Content is protected !!