Mysore
26
light rain

Social Media

ಮಂಗಳವಾರ, 04 ಆಗಸ್ಟ್ 2026
Light
Dark

ವಿವಾದದ ಬಳಿಕ ಕೆಐಎಡಿಬಿಗೆ ಸೈಟ್‌ ವಾಪಸ್‌ ನೀಡಿದ ಖರ್ಗೆ ಕುಟುಂಬ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ಧಾರ್ಥ ವಿಹಾರ್‌ ಟ್ರಸ್ಟ್‌ಗೆ ನೀಡಿರುವ ಕೆಐಎಡಿಬಿ ಸಿಎ ಸೈಟ್‌ಗಳನ್ನು ಹಿಂತಿರುಗಿಸಲು ನಿರ್ಧಾರ ಮಾಡಿದ್ದಾರೆ.

ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಸಿಎ ಸೈಟ್‌ಗಳ ಬಗ್ಗೆ ರಾಜ್ಯಪಾಲರ ಅಂಗಳಕ್ಕೆ ದೂರು ದಾಖಲಾಗುತ್ತಿದ್ದಂತೆ ಖರ್ಗೆ ಕುಟುಂಬ ಸೈಟ್‌ ಹಿಂತಿರುಗಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಕೆಐಎಡಿಬಿ ಹಂಚಿಕೆ ಮಾಡಿದ್ದ ನಿವೇಶನವನ್ನು ವಾಪಾಸ್‌ ನೀಡಲು ತೀರ್ಮಾನಿಸಲಾಗಿದೆ. ಏಕೆಂದರೆ ಈ ನಿವೇಶನದ ಬಗ್ಗೆ ಕಾನೂನು ಬಾಹಿರವಾಗಿ ಸೈಟ್‌ ಹಂಚಿಕೆಯಾಗಿದೆ ಎಂಬ ಆರೋಪವಿತ್ತು. ಅಲ್ಲದೇ, ಈ ವಿಚಾರದಲ್ಲಿ ಟ್ರಸ್ಟ್‌ನ ಅಧ್ಯಕ್ಷ ರಾಹುಲ್‌ ಅವರಿಗೆ ಮಾಹಿತಿ ದೊರಕಿರಲಿಲ್ಲ ಅಂತ ಅನ್ನಿಸುತ್ತೆ. ನಮ್ಮ ಕುಟುಂಬದಿಂದ ಮೂರು ಮಂದಿ ಅಷ್ಟೇ ರಾಜಕೀಯದಲ್ಲಿ ಸಕ್ರಿಯವಾಗಿದ್ದೇವೆ ಎಂದರು.

ನಂತರ, ನಮ್ಮ ಅಣ್ಣ ರಾಹುಲ್‌ ಖರ್ಗೆ ಅವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದಾರೆ. ಅವರಿಂದ ಕುಟುಂಬದ ಸದಸ್ಯರಿಗೆ ಹಿಂಸೆ ಆಗುತ್ತಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ಸೆಪ್ಟೆಂಬರ್‌.29 ರಂದು ಕೆಐಎಡಿಬಿಗೆ ಹಂಚಿಕೆಯಾಗಿರುವ ಸೈಟ್‌ಗಳನ್ನು ಹಿಂಪಡೆಯಲು ಪತ್ರ ಬರೆದಿದ್ದು, ನಿವೇಶನಗಳನ್ನು ನೀಡಿರುವುದನ್ನು ಕಾನೂನಾತ್ಮಕವಾಗಿಯೇ ಮರಳಿ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Tags:
error: Content is protected !!