Mysore
25
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋದ ನಟ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.

ಇದರ ಪರಿಣಾಮ ನಟ ದರ್ಶನ್‌ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ನಟ ದರ್ಶನ್‌ ಇರುವ ಸೆಲ್‌ ಬಳಿ ಸಿಸಿ ಕ್ಯಾಮರಾ ಸೇರಿದಂತೆ ಹಲವು ಬಿಗಿ ಭದ್ರತೆ ವಹಿಸಲಾಗಿದೆ. ಒಳಗಿನ ಶೌಚಾಲಯವನ್ನು ಕೂಡ ದರ್ಶನ್‌ ಅವರೇ ಕ್ಲೀನ್‌ ಮಾಡಬೇಕು. ಎಲ್ಲಾ ನಿಯಮಗಳಿಂದ ದರ್ಶನ್‌ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.

ಹೀಗಾಗಿ ನಟ ದರ್ಶನ್‌ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ದರ್ಶನ್‌ ಇರುವ ಸೆಲ್‌ನಲ್ಲಿ ಅನುಕುಮಾರ್‌, ನಾಗರಾಜು, ಜುಗ್ಗ, ಪ್ರದೋಷ್‌, ಲಕ್ಷ್ಮಣ್‌ ಇದ್ದಾರೆ. ನಾಗರಾಜ್‌ ಒಬ್ಬರನ್ನು ಬಿಟ್ಟು ಉಳಿದ ಆರೋಪಿಗಳಿಗೆ ದರ್ಶನ್‌ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

Tags:
error: Content is protected !!