Mysore
23
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ರಾಜ್ಯದ ಕಾಂಗ್ರೆಸ್‌ ಶಾಸಕರು

ಲಕ್ನೋ: ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದರು.

12 ಮಂದಿ ಶಾಸಕರು ಇಂದು ಬೆಳಿಗ್ಗೆ ಅಯೋಧ್ಯೆಗೆ ತೆರಳಿ ದೇವರ ದರ್ಶನ ಪಡೆದರು. ದರ್ಶನ ಮುಗಿಸಿ ಮತ್ತೆ ದೆಹಲಿಗೆ ವಾಪಸ್‌ ಆದರು.

ಇಂದು ದೆಹಲಿಯ್ಲಲಿ ಹೈಕಮಾಂಡ್‌ ನಾಯಕರು ಇಲ್ಲದ ಕಾರಣ ಬೆಳಿಗ್ಗೆ 8 ಗಂಟೆಯ ವಿಮಾನದ ಮೂಲಕ ಶಾಸಕರಾದ ಅಶೋಕ್‌ ಪಟ್ಟಣ್‌, ಟಿ.ಬಿಜಯಚಂದ್ರ, ರಾಘವೇಂದ್ರ ಹಿಟ್ನಾಳ್‌, ಡಿಜಿ ಶಾಂತನಗೌಡ, ಹಂಪನಗೌಡ ಬಾದರ್ಲಿ, ಬಸವರಾಜ್‌ ಶಿವಣ್ಣನವರ್‌, ಮಹಾಂತೇಶ್‌ ಕೌಜಲಗಿ, ಷಡಕ್ಷರಿ, ಯಶವಂತನಾರಾಯಣಗೌಡ ಪಾಟೀಲ್‌ ಅವರು ಅಯೋಧ್ಯೆಗೆ ಪ್ರಯಾಣಿಸಿದ್ದರು.

 

Tags:
error: Content is protected !!