Mysore
24
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಮೈಸೂರು| ಮರ ಕಡಿದ ಸ್ಥಳದಲ್ಲೇ ಗಿಡ ನೆಟ್ಟ ಅನ್ನದಾತರು

ಮೈಸೂರು: ರಸ್ತೆ ಅಗಲೀಕರಣಕ್ಕಾಗಿ 40ಕ್ಕೂ ಹೆಚ್ಚಿನ ಬೃಹದಾಕಾರದ ಮರಗಳನ್ನು ಕಡಿದ ಪ್ರಕರಣ ಈಗ ಮೈಸೂರಿನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೈಸೂರಿನ (Mysuru) ಎಸ್‌ಪಿ ಕಚೇರಿಯಿಂದ ಹೈದರ್‌ ಅಲಿ ರಸ್ತೆಯ ಕಾಳಿಕಾಂಬ ದೇವಾಲಯದವರೆಗೂ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಇದಕ್ಕಾಗಿ ಸುಮಾರು 40ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ಈ ಘಟನೆಯಿಂದ ಪರಿಸರ ಪ್ರೇಮಿಗಳು ಆಕ್ರೋಶಭರಿತರಾಗಿದ್ದಾರೆ.

ಸುದ್ದಿ ಹಿನ್ನೆಲೆ:- ಮೈಸೂರಿನಲ್ಲಿ ಮರಗಳ ಹನನ ; ಪರಿಸರ ಪ್ರೇಮಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ?

ಈ ಬೆನ್ನಲ್ಲೇ ಮರಗಳನ್ನು ಕಡಿದು ಹಾಕಿರುವ ರಸ್ತೆಯಲ್ಲೇ ಇಂದು ರಾಜ್ಯ ರೈತ ಸಂಘದಿಂದ (Rajya Raitha Sangha) ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮರ ಕಡಿದ ಜಾಗದಲ್ಲೇ ರೈತರು ವಿವಿಧ ತಳಿಯ ಗಿಡ ನೆಟ್ಟು, ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳಿಂದಲೂ ಗಿಡ ನೆಡುವ ಅಭಿಯಾನ ಶುರುವಾಗಿದ್ದು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಹೆಚ್ಚಿನ ಮಾಹಿತಿ:- ಮೈಸೂರು। ಮರಗಳ ಮಾರಣಹೋಮ ಖಂಡಿಸಿ ಪುಟಾಣಿಗಳಿಂದ ಪ್ರತಿಭಟನೆ

Tags: