Mysore
30
few clouds

Social Media

ಶನಿವಾರ, 18 ಏಪ್ರಿಲ 2026
Light
Dark

ಮೈಸೂರು | ಮನೆಯ ಮಂಚದ ಕೆಳಗೆ ಚಿರತೆ ಪ್ರಕ್ಷತ್ಯ, ಆತಂಕಕ್ಕೀಡಾದ ಮನೆಮಂದಿ

ಮೈಸೂರು : ನಗರದ ಸಿದ್ದಾರ್ಥ ನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿ, ಮಂಚದ ಕೆಳಗೆ ಅವಿತು ಕುಳಿತಿರುವುದು ಕಂಡುಬಂದಿದೆ.

ಘಟನೆ ಸಮಯದಲ್ಲಿ ಸುರೇಶ್ ಅವರ ಪತ್ನಿ ಸುಜಾತಾ ಮತ್ತು ತಾಯಿ ಶೈಲಜಾ ಮನೆಯಲ್ಲಿದ್ದರು. ಏಕಾಏಕಿ ಚಿರತೆ ಮನೆಗೆ ಪ್ರವೇಶಿಸಿ, ವೃದ್ಧೆ ಶೈಲಜಾ ಮಲಗಿದ್ದ ಕೊಠಡಿಯೊಳಗೆ ನುಗ್ಗಿತು. ಸಮಯಪ್ರಜ್ಞೆಯಿಂದ ಸುಜಾತಾ ಅವರು ತಮ್ಮ ಅತ್ತೆ ಶೈಲಜಾರನ್ನು ತಕ್ಷಣ ರಕ್ಷಿಸಿದರು. ಚಿರತೆಯ ಏಕಾಏಕಿ ಪ್ರವೇಶದಿಂದ ಮನೆಯವರು ತೀವ್ರ ಆತಂಕಕ್ಕೀಡಾದರು.

ಮನೆಯಲ್ಲಿ ಚಿರತೆ ಅಡಗಿರುವುದು ಗೊತ್ತಾದ ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.

Tags:
error: Content is protected !!