Mysore
23
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಮೈಸೂರು| ಮರ ಕಡಿದ ಜಾಗದಲ್ಲಿ ಮಕ್ಕಳಿಂದ ಅಭಿಯಾನ

cutting trees mysuru protest

ಮೈಸೂರು: ರಸ್ತೆ ಅಗಲೀಕರಣಕ್ಕಾಗಿ 40ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿರುವ ಪ್ರಕರಣ ಇದೀಗ ತೀವ್ರ ಕಾವು ಪಡೆದುಕೊಂಡಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಶ್ವ ಭೂ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಮರಗಳನ್ನು ಕಡಿದ ಜಾಗದಲ್ಲೇ ಮಕ್ಕಳು ಅಭಿಯಾನ ನಡೆಸಿದ್ದಾರೆ. ನಾವು ಮಕ್ಕಳು, ಮುಂದಿನ ಪ್ರಜೆಗಳು ಆದ್ದರಿಂದ ನಮಗೊಂದಿಷ್ಟು ಮರಗಳನ್ನು ಉಳಿಸಿ ಎಂದು ಅಭಿಯಾನ ನಡೆಸಿದ್ದು, ಮರವಿಲ್ಲದೇ ನರನಿರಬಲ್ಲನೇ ಎಂಬ ಶೀರ್ಪಿಕೆಯಡಿ ಜನಜಾಗೃತಿ ಮೂಡಿಸಿದರು.

ನಗರದ ಹೈದರಾಲಿ ರಸ್ತೆಯಲ್ಲೇ ಶಾಮಿಯಾನ ಹಾಕಿ ಜನಜಾಗೃತಿ ಮೂಡಿಸಿದ ಮಕ್ಕಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ಪರಿಸರ ಜಾಗೃತಿ ಕುರಿತು ಗೀತ ಗಾಯನ ಪ್ರಸ್ತುತಪಡಿಸಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಟಿ.ಎಸ್ ಹರ್ಷ ಅವರು ಮರವಿಲ್ಲದೆ ನರನಿರಬಲ್ಲನೆ ಎಂಬ ವಿಚಾರ ಕುರಿತು ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಪರಿಸರವಾದಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.

Tags:
error: Content is protected !!